ಕಡಬ: ಸುಬ್ರಹ್ಮಣ್ಯ- ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ಪೇರಡ್ಕ ಎಂಬಲ್ಲಿ ದುರಸ್ಥಿಯಲ್ಲಿರುವ ಇಮ್ಯಾನುವಲ್ ಚರ್ಚ್ ಗೋಪುರದ ಶಿಲುಬೆಯನ್ನು ಕಿತ್ತು ದುಷ್ಕರ್ಮಿಗಳು ಕೇಸರಿ ದ್ವಜವನ್ನು ಹಾರಿಸಿ ಗಲಭೆಗೆ ಯತ್ನಿಸಿದ್ದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನಿಯೋಗ ಚರ್ಚಿಗೆ ಬೇಟಿ ನೀಡಿ ಪರಿಶೀಲಿಸಿ ದುಷ್ಕರ್ಮಿಗಳ ಕೃತ್ಯವನ್ನು ತೀವೃವಾಗಿ ಖಂಡಿಸಿದೆ.ಹಾಗೂ ದುಷ್ಕರ್ಮಿಗಳ ವಿರುಧ್ದ ಎಸ್ಡಿಪಿಐ ಮುಖಾಂತರ ಚರ್ಚ್ ಫಾದ್ರಿ ಕೇಸು ದಾಖಲಿಸಿದರು.
ನಿಯೋಗದಲ್ಲಿ ಎಸ್ಡಿಪಿಐ ಜಿಲ್ಲಾ ಉಪಾಧ್ಯಕ್ಷರಾದ ವಿಕ್ಟರ್ ಮಾರ್ಟಿಸ್ ಕಡಬ ,ಕಡಬ ಬ್ಲಾಕ್ ಉಪಾಧ್ಯಕ್ಷರಾದ ಇಲ್ಯಾಸ್ ಹಲ್ಯಾರ , ಕಾರ್ಯದರ್ಶಿ ಅಬ್ದುಲ್ ನಬಿ ಶಾನ್, ಸದಸ್ಯರಾದ ನೌಷದ್ ಕಡಬ, ನವಾಝ್, ಹಾರೀಶ್ ಕಳಾರ, ಆರೀಫ್ ಕೊಯ್ಲ ಉಪಸ್ಥಿತರಿದ್ದರು.