ಪುತ್ತೂರು: ಕಳೆದ 37 ವರ್ಷಗಳಿಂದ ಪುತ್ತೂರಿನ ಮುರದಲ್ಲಿ ಕಾರ್ಯಚರಿಸುತ್ತಿದ್ದ ‘ಖಲಂದರಿಯ ರೆಸ್ಟೋರೆಂಟ್” ಸ್ಥಳಾಂತರಗೊಂಡು ಪುತ್ತೂರು ಬೊಳ್ವಾರಿನ ಇನ್ ಲ್ಯಾಂಡ್ ಮಯೂರದ ಮೊದಲನೇ ಮಹಡಿಯಲ್ಲಿ ಇಂದು ಶುಭಾರಂಭಗೊಂಡಿತು.
![](http://dtvkannada.in/wp-content/uploads/2022/05/IMG-20220516-WA0044.jpg)
ಧರ್ಮಗುರು ಅಸಯ್ಯದ್ ಫಝಲ್ ಕೋಯಮ್ಮ ತಂಞಳ್ ಕೂರತ್ ದುಃಆಶೀರ್ವಚನ ಮಾಡುವ ಮೂಲಕ ಉದ್ಘಾಟನೆಗೈದು ಶುಭಹಾರೈಸಿದರು. ಶುಚಿ-ರುಚಿಯಾದ ಆಹಾರವನ್ನು ಒದಗಿಸುತ್ತಾ ಬಂದಿರುವ ಖಲಂದರಿಯಾ ರೆಸ್ಟೊರೆಂಟ್ ಇದೀಗ ಸ್ಥಳಾಂತರಗೊಂಡು ನವೀಕರಣದೊಂದಿಗೆ ಶುಭಾರಂಭಗೊಂಡಿದ್ದು, ಮಾಂಸಾಹಾರಿ ಹಾಗೂ ಸಸ್ಯಾಹಾರಿ ಖಾದ್ಯಗಳು ಸೇರಿ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ಸಂಜೆಯ ಉಪಹಾರಗಳು ಮಿತದರದಲ್ಲಿ ಇಲ್ಲಿ ಲಭ್ಯವಾಗಲಿದೆ.
![](http://dtvkannada.in/wp-content/uploads/2022/05/IMG-20220516-WA0046.jpg)
ಜಿಲ್ಲಾ ಕೇಂದ್ರವಾಗುವ ನಿರೀಕ್ಷೆಯಲ್ಲಿರುವ ಪುತ್ತೂರಿನಲ್ಲಿ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಹೊಂದಿದ, ಕರಾವಳಿಯ ವೆರೈಟಿ ಖಾದ್ಯಗಳನ್ನೊಳಗೊಂಡ ಖಲಂದರಿಯಾ ರೆಸ್ಟೊರೆಂಟ್, ಪುತ್ತೂರು ಭಾಗದ ಜನತೆಗೂ ಬೇರೆ ಪ್ರದೇಶದಿಂದ ಬರುವ ಪ್ರವಾಸಿಗರಿಗೂ ಒಳ್ಳೆಯ ಖಾದ್ಯವನ್ನು ಉಣಬಡಿಸಲು ತಯಾರಾಗಿದೆ.
![](http://dtvkannada.in/wp-content/uploads/2022/05/IMG-20220516-WA0045-1024x552.jpg)
ಕಳೆದ 37 ವರ್ಷಗಳಿಂದ ಹೋಟೆಲ್ ಉದ್ಯಮ ನಡೆಸಿ ಯಶಸ್ಸು ಕಂಡಿರುವ ಮಾಲಿಕರಾದ ಅಬ್ದುಲ್ ರಹಿಮಾನ್, ಇದೀಗ ತಮ್ಮ ಹೊಟೇಲ್ ಉದ್ಯಮವನ್ನು ಪುತ್ತೂರು ಸಮೀಪದ ಬೊಳ್ವಾರ್’ಗೆ ಸ್ಥಳಾಂತರಿಸಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 6 ರ ತನಕ ಕರಾವಳಿ ಶೈಲಿಯ ಬಗೆಬಗೆಯ ಖಾದ್ಯಗಳೊಂದಿಗೆ ಗ್ರಾಹಕರ ಸೇವೆಗೆ ಸಿದ್ದವಾಗಿ ನಿಂತಿದೆ.
![](http://dtvkannada.in/wp-content/uploads/2022/05/IMG-20220516-WA0043.jpg)
ವಿನೂತನ ರೆಸ್ಟೋರೆಂಟ್ ಮಾಳಿಗೆಗೆ ಅತಿಥಿಗಳಾಗಿ ಸಿವಿಲ್ ಇಂಜಿನಿಯರ್ ಸನದ್ ಯೂಸುಫ್ ಪುತ್ತೂರು, ಇನ್ನೋರ್ವ ಸಿವಿಲ್ ಇಂಜಿನಿಯರ್ ನೌಫಲ್ ನೆಕ್ಕಿಲಾಡಿ, ಶಮೀಮ್ ಮೊಹಮ್ಮದ್, ಉದ್ಯಮಿ ದಾವೂದ್ ತಾಜ್ ಸಂಪ್ಯ, ಇಫಾಝ್ ಬನ್ನೂರು ಸಹಿತ ಹಲವರು ಭೇಟಿ ನೀಡಿ ಶುಭ ಹಾರೈಸಿದರು.