ಕಾಸರಗೋಡು: ಮನೆಯೊಂದರ ಛಾವಣಿಗೆ ಶೀಟ್ ಹಾಕಲು ಅಳತೆ ತೆಗೆಯುತ್ತಿದ್ದಾಗ ಮಹಡಿಯಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕಾಸರಗೋಡಿನ ಕುಂಬ್ಳೆ ಸಮೀಪ ಮಂಡೆಕಾಪು ಎಂಬಲ್ಲಿ ನಡೆದಿದೆ.
ಘಟನೆಯಲ್ಲಿ ಮೃತಪಟ್ಟ ವ್ಯಕ್ತಿ ಹೇರೂರು ಕಂಗ್ವೆ ನಿವಾಸಿ ಸಂದೀಪ್ ಶೆಟ್ಟಿ (35) ಎಂದು ತಿಳಿದು ಬಂದಿದೆ. ಸಂದೀಪ್ ಅವಿವಾಹಿತರಾಗಿದ್ದು ಸಹೋದರಿ ಹಾಗು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಸಂದೀಪ್ ಯುವ ಮೋರ್ಚಾ ಮಂಜೇಶ್ವರ ಮಂಡಲ ಉಪಾಧ್ಯಕ್ಷರಾಗಿದ್ದು, ಫ್ರೆಂಡ್ಸ್ ಹೇರೂರು ಸಂಘಟನೆಯ ಸ್ಥಾಪಕಾಧ್ಯಕ್ಷರಾಗಿದ್ದರು. ಜೊತೆಗೆ ಹೇರೂರು ವೀರಮಾರುತಿ ವ್ಯಾಯಾಮ ಶಾಲೆಯ ಸದಸ್ಯರಾಗಿದ್ದರು.
ಛಾವಣಿಗೆ ಶೀಟ್ ಹಾಕಲು ಮೇಲೆ ಹತ್ತಿ ಅಳತೆ ತೆಗೆಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕೆಳಕ್ಕೆ ಬಿದ್ದ ಸಂದೀಪ್’ನನ್ನು ಆಸ್ಪತ್ರೆಗೆ ಸಾಗಿಸಿದಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.