ಉಳ್ಳಾಲ: ಮಾವು ಕೀಳಲೆಂದು ಮಾವಿನ ಮರಕ್ಕೆ ಹತ್ತಿದ ಯುವಕನಿಗೆ ಸಮೀಪದಲ್ಲೇ ಹಾದು ಹೋದ ವಿದ್ಯುತ್ ತಂತಿ ಸ್ಪರ್ಶಿಸಿ ಮರಣ ಹೊಂದಿದ ಘಟನೆ ಇದೀಗ ಉಳ್ಳಾಲದಲ್ಲಿ ನಡೆದಿದೆ.
![](http://dtvkannada.in/wp-content/uploads/2022/06/IMG-20220624-WA0022.jpg)
ಮೃತಪಟ್ಟ ಯುವಕನನ್ನು ಉಳ್ಳಾಲದ ಜಲಾಲ್ ಬಾಗ್ ನಿವಾಸಿ ಇಲ್ಯಾಸ್(28) ಗುರುತಿಸಲಾಗಿದೆ.
ಮಾವು ಕೀಳಲೆಂದು ಮರಕ್ಕೆ ಹತ್ತಿದ ಈತ ಕರೆಂಟ್ ವಯರ್ ಸ್ಪರ್ಶಿಸಿದ್ದು ಕರೆಂಟ್ ಅಪಘಾತಕ್ಕೆ ಯುವಕ ಕೊನೆಯಿಸಿರೆಳೆದಿದ್ದಾನೆ.
![](http://dtvkannada.in/wp-content/uploads/2022/06/180672dac5bd5e86342c8a15fa7c23c0717e30398d2dcc386a1c7c54f7fbb292.0.webp)
ಮಾವಿನ ಮರದ ಟೊಂಗೆಗೆ ತಾಗಿಯೇ ವಿದ್ಯುತ್ ತಂತಿ ಪಾಸಾಗಿದ್ದು ಮೆಸ್ಕಾಂ ಅಧಿಕಾರಿಗಳು ಕಟಾವು ಗೊಳಿಸದೇ ಬಿಟ್ಟಿರುವುದು ಈ ಮರಣಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
![](http://dtvkannada.in/wp-content/uploads/2022/06/6eedbb79f23d6e97c82fdcf672fd9a7762a6d830a9208ac6e1f91c91986a96ed.0.webp)
ಯುವಕ ತೊಕ್ಕೊಟ್ಟು ನಲ್ಲಿರುವ ಸಾಗರ್ ಕಲೆಕ್ಷನ್ ನಲ್ಲಿ ಸೂಪರ್ ವೈಸರ್ ಆಗಿ ಕಳೆದ 14 ವರುಷಗಳಿಂದ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.