ಕಾಣಿಯೂರು: ಬೈತಡ್ಕ ನದಿಗೆ ಕಾರು ಬಿದ್ದು ಪ್ರಯಾಣಿಕರು ನೀರು ಪಾಲಾದ ಘಟನೆ ಮೊನ್ನೆ ಸಂಭವಿಸಿದ್ದು.
ಘಟನೆಗೆ ಸಂಬಂಧಿಸಿದಂತೆ ಇಬ್ಬರ ಮೃತದೇಹ ಮರಕ್ಕಡ ನದಿಯ ಬಳಿ ಪತ್ತೆಯಾಗಿದೆ.
ಮೊನ್ನೆಯಿಂದ ತೀವ್ರವಾದ ಮಳೆಯಾದರಿಂದ ನದಿಯಲ್ಲಿ ನೀರು ತುಂಬಾನೇ ಇತ್ತು ನಿನ್ನೆಯಿಂದ ಮಳೆ ಕಡಿಮೆಯಾಗಿತ್ತು ಹಾಗೆ ನದಿಯಲ್ಲಿ ನೀರಿನ ಮಟ್ಟವು ಕಡಿಮೆಯಾಗಿತ್ತು.
ಇದೀಗ ಮರಕ್ಕಡ ಎಂಬಲ್ಲಿ ಒಂದು ಮರದ ದಿಮ್ಮಿ ಮೇಲೆ ಇಬ್ಬರ ಮೃತದೇಹ ಪತ್ತೆಯಾಗಿದೆ.
ಹೊಳೆಯಲ್ಲಿ ನೀರು ಕಡಿಮೆಯಾದ ಹಿನ್ನಲೆಯಲ್ಲಿ ಮೃತ ದೇಹ ಬೆಳಕಿಗೆ ಬಂದಿದೆ.