dtvkannada

ಉಪ್ಪಿನಂಗಡಿ: ಪ್ರತಿಯೊಂದು ಶಾಲೆಗಳ ಪ್ರಥಮ ಸ್ತಂಭಗಳು ಅದು ಆ ಶಾಲೆಯ ಹಳೆಯ ವಿದ್ಯಾರ್ಥಿಗಳಾಗಿದ್ದಾರೆ ಶಾಲೆಯ ಮೇಲೆ ಅಭಿಮಾನವಿಟ್ಟು ಬಂದು ಶಿಕ್ಷಕರ ಬಗ್ಗೆ ನೀವು ತೋರಿದ ಒಲವು ಅದು ಮಹತ್ವದ್ದು ಎಂದು ಶ್ರೀ ಶರತ್ ಕುಮಾರ್ ಚೌಟ ಇಂದು ಸರಕಾರಿ ಪ್ರೌಢಶಾಲೆ ಸರಳಿಕಟ್ಟೆ ಯಲ್ಲಿ ನಡೆದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸರಕಾರಿ ಪ್ರೌಢ ಶಾಲೆ ಸರಳಿಕಟ್ಟೆ ಇದರ 2014 ರ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಸರಳಿಕಟ್ಟೆ ಶಾಲೆಯಲ್ಲಿ ಇಂದು ನಡೆಯಿತು.

ಶಾಲಾ ಮುಖ್ಯ ಶಿಕ್ಷಕ ಜಾವೇದ್ ಸರ್ ರವರು ಅಧ್ಯಕ್ಷತೆ ವಹಿಸಿದರು,
ಕಾರ್ಯಕ್ರಮದಲ್ಲಿ ಶಿಕ್ಷಕರಾದ ರಾಜೇಸಾಬ್ ,ಹನೀಫ್ ಮಾಸ್ತರ್
ಶಿಕ್ಷಕಿಯರಾದ ಶಾಂತ, ನಳಿನಾಕ್ಷಿ, ವಿಜಯಶ್ರೀ, ಸಪ್ನಾ ರಾವ್ ರವರು ಉಪಸ್ಥಿತರಿದ್ದರು
ಬಾತಿಶ್ ತೆಕ್ಕಾರು ಸ್ವಾಗತಿಸಿ ವಂದಿಸಿದರು.

ಹಲವಾರು ಪೂರ್ವ ವಿದ್ಯಾರ್ಥಿಗಳು ಸ್ನೇಹ ಸಮ್ಮಿಲನಕ್ಕೆ ಸಾಕ್ಷಿಯಾದರು

By dtv

Leave a Reply

Your email address will not be published. Required fields are marked *

error: Content is protected !!