dtvkannada

'; } else { echo "Sorry! You are Blocked from seeing the Ads"; } ?>

ಮಂಗಳೂರು: ನಿನ್ನೆ ರಾತ್ರಿ ಸುರತ್ಕಲ್ ನಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಫಾಝಿಲ್ ನ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದು ಮಂಗಳಪೇಟೆಯ ಮಸೀದಿಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಆಸ್ಪತ್ರೆಯಿಂದ ಮೃತದೇಹವನ್ನು ಪೋಸ್ಟ್ ಮಾರ್ಟಂ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದು ತದ ನಂತರ ಫಾಝಿಲ್ ನ ಮನೆಗೆ ಮೃತದೇಹವನ್ನು ಮೆರೆವಣೆಗೆ ಮೂಲಕ ಕರ ತರಲಾಯಿತು.
ಮನೆಯಲ್ಲಿ ಅಂತಿಮ ದರ್ಶನ ಮುಗಿಸಿ ಸ್ಥಳೀಯ ಮಸೀದಿಗೆ ಮೃತದೇಹವನ್ನು ಕೊಂಡೊಯ್ದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

'; } else { echo "Sorry! You are Blocked from seeing the Ads"; } ?>

ಮೆರೆವಣೆಗೆಯಲ್ಲಿ ಯಾವುದೇ ಕಲಹ, ಗದ್ದಲವಿಲ್ಲದೇ ಅಹಿತಕರ ಘಟನೆ ಸಂಭವಿಸದೇ ಮೃತದೇಹದ ಮೆರೆವಣೆಗೆ ನಡೆಯಿತು.
ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು ಸೆಕ್ಷನ್ 144 ಜಾರಿಗೊಳಿಸಿದ್ದು ಪೊಲೀಸರು ಬೀಡು ಬಿಟ್ಟಿದ್ದಾರೆ.
ಫಾಝಿಲ್ ಅಂತಿಮ ದಶನಕ್ಕೆ ಸಾವಿರಾರು ಮಂದಿ ಸಾಕ್ಷಿಯಾಗುತ್ತಿದ್ದಾರೆ.

ಹಲವರು ವಶಕ್ಕೆ!: ನಿನ್ನೆ ರಾತ್ರಿಯಿಂದ 12 ಜನರನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಅವರು ಫಾಝಿಲ್ ಹತ್ಯೆಗೆ ಸಂಭಂಧಪಟ್ಟವರಲ್ಲ. ನಿಷೇದಾಜ್ಞೆ ನಡುವೆ ಅನುಮಾನಾಸ್ಪದ ಓಡಾಟ ಮಾಡುತ್ತಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ ಎನ್ನಲಾಗಿದೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!