dtvkannada

ಬಳ್ಳಾರಿ: ನನಗೆ ನನ್ನದೇ ಸ್ವತಃ ಪಕ್ಷದವರೇ ಕಿರುಕುಳ ನೀಡುತ್ತಿದ್ದಾರೆ ನನಗೆ ಮುಂದಿನ ದಿನಗಳಲ್ಲಿ ನನ್ನ ರಾಜಕೀಯ ಜೀವನ ಹೇಗಿರುತ್ತೋ ಏನು ಹೇಳಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಜನಾರ್ಧನ ರೆಡ್ಡಿ ಸ್ವತಃ ತನ್ನದೇ ಪಕ್ಷದ ವಿರುದ್ಧ ಕಿಡಿ ಕಾರಿದ್ದಾರೆ.

ಬಳ್ಳಾರಿಯಲ್ಲಿ ನಡೆದ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಮೆಂಟ್ ನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ ನಮಗೆ ಕಿರುಕಳ ನೀಡಬೇಕಾಗಿದ್ದು ಕಾಂಗ್ರೆಸ್ ಪಕ್ಷ ಆದರೆ ನನಗೆ ನಾನೇ ಬೆಳೆಸಿದ ಪಕ್ಷ ನನಗೆ ತೊಂದರೆ ನೀಡುತ್ತಿದ್ದು ನನ್ನ ರಾಜಕೀಯ ಜೀವನ ಮುಂದಿನ ದಿನಗಳಲ್ಲಿ ಹೇಗೋ ಕೂಡ ತಿರುವು ಪಡೆಯಲು ಸಾಧ್ಯವಿದೆ ಎಂದು ಜನಾರ್ದನ ರೆಡ್ಡಿ ಹೇಳಿದರು.

ಇನ್ನು ಇವರ ಮಾತಿನ ಬೆನ್ನಲ್ಲೇ ರೆಡ್ಡಿಯವರು ಕಾಂಗ್ರೆಸ್ ಕೈ ಹಿಡಿಯುತ್ತಾರ ಎಂಬ ಶಂಕೆ ವ್ಯಕ್ತಪಡಿಸಿದ್ದು.
ಬಳ್ಳಾರಿಯ ಜನ ನಾಯಕ ಮಾಜಿ ಸಚಿವ ತನ್ನದೇ ಬಿಜೆಪಿ ಪಕ್ಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಇದೀಗಾಗಲೇ ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!