dtvkannada

ಮಂಗಳೂರು: ಇಪ್ಪತ್ತೆಂಟು ವರ್ಷದ ಯುವಕನೋರ್ವ ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಹೃದಯಾಘಾತದಿಂದ ಮೃತಪಟ್ಟ ಯುವಕ ಕೃಷ್ಣಾಪುರದ ಸಾಹಿಫ್ ಮುದಸ್ಸಿರ್(28) ಎಂದು ತಿಳಿದು ಬಂದಿದೆ.

ಕೃಷ್ಣಾಪುರ ನಿವಾಸಿಯಾಗಿರುವ ಸಾಹಿಫ್ ಮುಹಮ್ಮದ್ ನೂರುದ್ದೀನ್ ರವರ ಮಗ ಹಾಗೂ ಮಂಗಳೂರಿನ ಪಡೀಲ್ ಸಮೀಪದ ಬಜಾಲ್ ನಝೀರ್ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ರವೂಫ್ ಬಜಾಲ್ ರವರ ಸಹೋದರಿಯ ಮಗನಾಗಿದ್ದು ಎದೆ ನೋವು ಕಾಣಿಸಿಕೊಂಡು ಮಂಗಳೂರಿನ ಖಾಸಾಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಅನೇಕ ಬಂಧು ಮಿತ್ರಾಳಿಗಳನ್ನು ಕುಟುಂಬ ಬಳಗವನ್ನು ಅಗಲಿದ್ದಾರೆಂದು ತಿಳಿದು ಬಂದಿದೆ.

By dtv

Leave a Reply

Your email address will not be published. Required fields are marked *

error: Content is protected !!