';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬಂಟ್ವಾಳ: ಗುಡ್ಡವೊಂದರಲ್ಲಿ ಯುವಕನೋರ್ವನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೈದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಮುಡಿಪು ಸಮೀಪದ ಇರಾ ಮುಳೂರು ಎಂಬಲ್ಲಿ ಇಂದು ನಡೆದಿದೆ.
ಸುರಿಬೈಲ್ ನಿವಾಸಿ ಸಮದ್(19) ಮೃತಪಟ್ಟ ಯುವಕ. ಘಟನೆಗೆ ಸಂಬಂಧಿಸಿದಂತೆ ಬೋಳಂತೂರು ನಿವಾಸಿ ಅದ್ದು ಯಾನೆ ಅದ್ರಾಮ ಎಂಬಾತನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಅದ್ರಾಮ ಸಲಿಂಗಕಾಮಿಯಾಗಿದ್ದು ಈ ತರ ಹಲವಾರು ಪುಟ್ಟ ಬಾಲಕರನ್ನು ತನ್ನ ಕಾಮ ಚಟಕ್ಕೆ ಬಳಸಿಕೊಂಡು ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ.
ಇದೀಗ ಸಣ್ಣ ವಯಸ್ಸಿನ ಬಾಲಕನನ್ನು ತನ್ನ ಕಾಮ ತೀಟೆಗಾಗಿ ಬಳಸಿಕೊಂಡು ಮುಗಿಸಿ ಬಿಟ್ಟಿದ್ದಾನೆ ಎನ್ನಲಾಗಿದೆ.
ಮುಡಿಪು ಸಮೀಪದ ಇರಾ ಎಂಬಲ್ಲಿ ನಿರ್ಜನ ಗುಡ್ಡವೊಂದರಲ್ಲಿ ಬಾಲಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಬಂಟ್ವಾಳ ಮತ್ತು ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.