dtvkannada

ಉಪ್ಪಿನಂಗಡಿ: SYS, SSF SBS ಮತ್ತು KCF ಕರಾಯ ಶಾಖೆ ವತಿಯಿಂದ ಶೈಕ್ ಜೀಲಾನಿ, ತಾಜುಲ್ ಉಲಮಾ, ಶಂಸುಲ್ ಉಲಮಾ ಹಾಗು ಸುನ್ನೀ ಉಲಮಾ ನೇತಾರರ ಅನುಸ್ಮರಣಾ ಸಮ್ಮೇಳನ ನಾಳೆ ಡಿಸೆಂಬರ್1 ಗುರುವಾರದಂದು ಸಂಜೆ 4 ಗಂಟೆಗೆ ಕರಾಯ ತ್ವಾಹಿರ್ ಅಹ್ದಲ್ ನಗರ, ಮರ್ಹೂಂ ಮುಹಮ್ಮದ್ ಮುಸ್ಲಿಯಾರ್ ವೇದಿಕೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಹಲವಾರು ಉಲಮಾ ಉಮರಾ ನಾಯಕರು ಬಾಗವಹಿಸಲಿದ್ದು
ಖ್ಯಾತ ಪ್ರಭಾಷಣಗಾರ ಬಹು ನೌಫಲ್ ಸಖಾಫಿ ಕಳಸ ಮುಖ್ಯ ಪ್ರಭಾಷಣಗೈಯಲಿದ್ದಾರೆ.
ನೌಫಲ್ ಸಖಾಫಿ ಕಳಸ ತನ್ನ ವಿವಿಧ ಬಾಷೆಗಳ ಬಾಷಣಗಳ ಮೂಲಕ ಸಹಸ್ರಾರು ಅಭಿಮಾನಿಗಳನ್ನು ಸಂಪಾದಿಸಿದ ಖ್ಯಾತ ಬಾಷಣಗಾರರಾಗಿದ್ದಾರೆ.

ಅವರ ಬಾಷಣ ಆಲಿಸಲು ಉಪ್ಪಿನಂಗಡಿ ವ್ಯಾಪ್ತಿಯ ಸಹಸ್ರಾರು ಜನರು ಆಗಮಿಸುವ ನಿರೀಕ್ಷೆ ಇದೆ ಎಂದು ಸಂಘಟಕರು ಮಾಧ್ಯಮಕ್ಕೆ ತಿಳಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!