ಮಂಗಳೂರು: ಖ್ಯಾತ ತುಳು ಹಾಸ್ಯ ನಟ ಅರವಿಂದ್ ಬೋಳಾರ್ ಬೈಕ್ ಅಪಘಾತದಲ್ಲಿ ಕಾಲಿಗೆ ಗಾಯಗಳಾಗಿದ್ದು ಮಂಗಳೂರುನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾನು ಆರೋಗ್ಯವಾಗಿದ್ದೇನೆ ಯಾರು ಆತಂಕ ಪಡುವ ಅವಶ್ಯಕತೆಯಿಲ್ಲ ದೊಡ್ಡ ಪ್ರಮಾಣದ ಯಾವುದೇ ಗಾಯಗಳಾಗಿಲ್ಲ ಹೆಲ್ಮೆಟ್ ಧರಿಸಿದರಿಂದ ಸೇಫ್ ಆಗಿದ್ದೇನೆ ಎಂದು ಅರವಿಂದ್ ಬೋಳಾರ್ ಹೇಳಿದ್ದಾರೆ.
ನಿಮ್ಮ ಪ್ರೀತಿಗೆ ಅಬಾರಿಯಾಗಿದ್ದೇನೆ ಹಲವಾರು ಮಂದಿ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ ಎಂದರು.
ಇನ್ನು ಚಿಕ್ಕದಾದ ಒಂದು ಸರ್ಜರಿ ಆಗಬೇಕಿದೆ ಎರಡು ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದೇನೆ ಎಂದು ಅವರು ಹೇಳಿದರು.