dtvkannada

ಮಂಗಳೂರು: ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತ ಸಂಭವಿಸಿ ಮಂಗಳೂರು ಮೂಲದ ವ್ಯಕ್ತಿ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಮಲ್ಲೂರು ನಿವಾಸಿ ಸುಲೈಮಾನ್(35) ಎಂದು ತಿಳಿದು ಬಂದಿದೆೆ.

ಮಂಗಳೂರಿನ ಮಲ್ಲೂರು ಪಲ್ಲಿಬೆಟ್ಟು ಅಬೂಬಕರ್ ಎಂಬವರ ಪುತ್ರ ಸುಲೈಮಾನ್ ಅವರು ಸೌದಿ ಅರೇಬಿಯಾದ ಜುಬೈಲ್’ನಲ್ಲಿ ಉದ್ಯೊಗದಲ್ಲಿದ್ದರು. ಇಬ್ಬರು ಮಕ್ಕಳ ತಂದೆಯಾಗಿರುವ ಸುಲೈಮಾನ್ ಎಪ್ರಿಲ್ 20 ರಂದು ಊರಿಗೆ ಬರಲು ನಿಶ್ಚಯಿಸಿದ್ದರು. ಆದರೆ ವಿಧಿ ಬೇರೆಯೇ ಆಗಿತ್ತು.

ರಸ್ತೆ ದಾಟುವ ಸಂದರ್ಭ ವೇಗವಾಗಿ ಬಂದ ಸೌದಿ ಪ್ರಜೆ ಸಂಚರಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಕಾರು ಚಾಲಕನನ್ನು ಸೌದಿ ಪೊಲೀಸರು ಬಂಧಿಸಿದ್ದು, ದುರ್ಘಟನೆ ನಡೆದ 5 ದಿನದ ನಂತರ ಮೃತದೇಹದ ಗುರುತು ಪತ್ತೆ ಆಗಿದೆ ಎನ್ನಲಾಗಿದೆ.

ಮೃತದೇಹ ಜುಬೈಲ್ ಸೆಂಟಲ್ ಹಾಸ್ಪಿಟಲ್’ನಲ್ಲಿದ್ದು, ಕೆಸಿಎಪ್ ಸೌದಿ ಸಂಘಟನೆಯ ಕಾರ್ಯಕರ್ತರು ದಫನ ಕಾರ್ಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

By dtv

Leave a Reply

Your email address will not be published. Required fields are marked *

error: Content is protected !!