dtvkannada

'; } else { echo "Sorry! You are Blocked from seeing the Ads"; } ?>

ವಿಟ್ಲ: ಖಲೀಫ ಗಯ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ.)ಜಂಟಿ ಆಶ್ರಯದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ, ಮಂಗಳೂರು ಸಹಭಾಗಿತ್ವದಲ್ಲಿ ಖಲೀಫ ಗಯ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಇದರ ಸದಸ್ಯರಾದ ಮರ್ಹೂಂ ಹಬೀಬ್ ಉಕ್ಕುಡ ರವರ ಸ್ಮರಣಾರ್ಥ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 14 ಮೇ 2023 ನೇ ಆದಿತ್ಯವಾರದಂದು ವಿಟ್ಲದ ಉಕ್ಕುಡದಲ್ಲಿರುವ ತಾಜುಲ್ ಉಲಮಾ ಶರೀಅತ್ ಕಾಲೇಜು ವಠಾರದಲ್ಲಿ ಯಶಸ್ವಿಯಾಗಿ ನಡೆಯಿತು.

ಸ್ಥಳೀಯ ಖತೀಬ್ ಉಸ್ತಾದರಾದ ಮಳಳಿ ಸಖಾಫಿ ಅವರ ದುಃಆಶೀರ್ವಾದನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.

'; } else { echo "Sorry! You are Blocked from seeing the Ads"; } ?>

ಜೀವದಾನಿಯಾದ 65 ಜನಸ್ನೇಹಿ ರಕ್ತದಾನಿಗಳು:
ಯಶಸ್ವಿ ರಕ್ತದಾನ ಕಾರ್ಯಕ್ರಮದಲ್ಲಿ ಒಟ್ಟು 65 ಮಂದಿ ರಕ್ತದಾನ ಮಾಡಿ ಮಾನವೀಯತೆ ಮೆರೆದರು . ರಕ್ತದಾನ ಮಾಡಿದ ಸರ್ವ ಸಹೃದಯೀ ರಕ್ತ ದಾನಿಗಳಿಗೂ,ರಕ್ತನಿಧಿ ಸಿಬ್ಬಂದಿ ವರ್ಗಕ್ಕೂ, ಕಾರ್ಯಕ್ರಮದ ಯಶಸ್ಸಿಗಾಗಿ ಹಗಲಿರುಳು ಶ್ರಮಿಸಿದ ಖಲೀಫ ಗಯ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳಿಗೂ,ಮಾದ್ಯಮ ವರದಿಗಾರರಿಗೂ,ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಬ್ಲಡ್ ಹೆಲ್ಪ್ ಲೈನ್ ಸಂಸ್ಥೆಯ ಪರವಾಗಿ ಕೃತಜ್ಞತೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಹಕೀಂ ಕಾನ, ಹ್ಯಾರಿಸ್ ದರ್ಬೆ, ಝುಬೈರ್ ದರ್ಬೆ, ಶಾಫಿ ದರ್ಬೆ, ರಾಝಿಕ್ ಕೆ.ಎಸ್, ಉಬೈದ್ ದರ್ಬೆ, ಇಬ್ರಾಹಿಂ ಕುದ್ದುಪದವು, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಕಾರ್ಯನಿರ್ವಾಹಕರಾದ ರಝ್ವೀನ್ ಗುರುವಾಯನಕೆರೆ, ನೌಶಾದ್ ಮಂಚಿ, ಜುನೈದ್ ಬಂಟ್ವಾಳ, ಮುಸ್ತಫ ಬೋಳಂತೂರು, ಅಲಿ ಪರ್ಲಡ್ಕ ಹಾಗೂ ಖಲೀಫ ಗಯ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

'; } else { echo "Sorry! You are Blocked from seeing the Ads"; } ?>

ಯಶಸ್ವಿ ಶಿಬಿರ ಕಾರ್ಯಕರ್ಮದಲ್ಲಿ ಸಹಕರಿಸಿದ ಎಲ್ಲರಿಗೂ ಪ್ರತ್ಯೇಕವಾಗಿ ಉಕ್ಕುಡ ಶರೀಅತ್ ಸಂಸ್ಥೆಯಲ್ಲಿ ಸ್ಥಳಾವಕಾಶ ಮಾಡಿಕೂಟ್ಟ ಶರೀಫ್ ಉಕ್ಕುಡ ರವರಿಗೆ ಮರ್ಹೂಂ ಹಬೀಬ್ ಉಕ್ಕುಡ ರವರ ಸಹೋದರರಾದ ಜಲೀಲ್ ಉಕ್ಕುಡ ಹಾಗೂ ಜಮೀಲ್ ಉಕ್ಕುಡ ಧನ್ಯವಾದ ಸಲ್ಲಿಸಿದರು.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!