ಮಾಣಿ: ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತ ಯುವಕನನ್ನು ಮಾಣಿ ಸೂರಿಕುಮೇರಿನ ಇರ್ಷಾದ್ ಉಮರ್(33) ಎಂದು ಗುರುತಿಸಲಾಗಿದೆ.
ವಿದೇಶದಲ್ಲಿ ಉದ್ಯೋಗದಲ್ಲಿದ್ದ ಇರ್ಶಾದ್ ರವರು ಅನಾರೋಗ್ಯದ ಕಾರಣ ವಾರಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು. ಊರಿಗೆ ಬಂದಿದ್ದ ಇರ್ಷಾದ್ ಮಂಗಳೂರಿನ ಯುನಿಟಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೆ ತುರ್ತು ರಕ್ತದ ಆವಶ್ಯಕತೆ ಇದೆ ಎಂದು ಹತ್ತು ಹಲವು ಗ್ರೂಪ್ ಗಳಲ್ಲಿ ಆರ್ಟಿಕಲ್ ವೈರಲ್ ಆಗುತ್ತಿದ್ದವು. ಮನವಿಗೆ ಸ್ಪಂಧಿಸಿ ಹಲವು ಮಂದಿ ರಕ್ತ ಹಾಗೂ ಪ್ಲಾಸ್ಮಾ ದಾನ ಮಾಡಿದ್ದರು.
ಆದರೆ ಇಂದು(ಶುಕ್ರವಾರ)ರಾತ್ರಿ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ಸಾವಿಗೆ ಆಸ್ಪತ್ರೆಯ ವೈದ್ಯರೇ ಕಾರಣ ಎಂದು ಮೃತ ಯುವಕನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತರು ತಾಯಿ, ಪತ್ನಿ, 4 ವರ್ಷದ ಗಂಡು ಮಗು ಹಾಗೂ 6 ತಿಂಗಳ ಹೆಣ್ಣು ಮಗಳನ್ನು ಅಗಲಿದ್ದಾರೆ. ಮರಣದ ಸುದ್ದಿ ಕೇಳಿದ ಊರಿನಲ್ಲಿ ಸ್ಮಶಾನ ಮೌನ ಆವರಿಸಿದೆ.