';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಉಳ್ಳಾಲ: 19 ವರ್ಷದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಲಪಾಡಿ ಸಮೀಪದ ಕೆಸಿರೋಡ್ ಬಳಿ ಸಂಭವಿಸಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕೆಸಿ ರೋಡ್ ನಿವಾಸಿ ರಶೀದಾ ಬಾನು ಎಂಬವರ ಪುತ್ರ ಮಹಮ್ಮದ್ ನುಹ್ಮಾನ್(19) ಎಂದು ಗುರುತಿಸಲಾಗಿದೆ.
ನುಹ್ಮಾನ್ ಫುಟ್ಬಾಲ್ ಆಟಗಾರನಾಗಿದ್ದು, ಉತ್ತಮ ಗೋಲ್ ಗೀಪರ್ ಆಗಿದ್ದ. ಏನೋ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.
ಐವರು ಸಹೋದರಿಯ ಮುದ್ದಿನ ಸಹೋದರನಾಗಿದ್ದ ನುಹ್ಮಾನ್ ಇಂದು ಮನೆಯ ಒಳಗಡೆ ಕೊಠಡೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಮನೆಮಂದಿ ಬಾಗಿಲು ಒಡೆದು ನೋಡಿದಾಹ ಘಟನೆ ಬೆಳಕಿಗೆ ಬಂದಿದೆ. ಏಕೈಕ ಪುತ್ರನನ್ನು ಕಳೆದುಕೊಂಡ ತಾಯಿಯ ರೋಧನೆ ಮುಗಿಲುಮುಟ್ಟಿದೆ.
ಯುಟಿ ಖಾದರ್ ಸಂತಾಪ:
ಘಟನೆ ಬಗ್ಗೆ ಉಳ್ಳಾಲ ಶಾಸಕರಾದ ಯುಟಿ ಖಾದರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಕುಟುಂಬಸ್ಥರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.