dtvkannada

ಪುತ್ತೂರು: ಬಾಲಕರ ತಂಡವೊಂದು ಸಂಜೆ ವೇಳೆಯಲಿ ಹೊಳೆಯಲ್ಲಿ ಈಜಲು ಹೋಗಿ ಓರ್ವ ಬಾಲಕ ನೀರಿನಲ್ಲಿ ಕಣ್ಮರೆಯಾಗಿದ್ದು ಇಂದು ಬೆಳಿಗ್ಗೆ ಬಾಲಕನ ಮೃತದೇಹ ಪತ್ತೆಯಾದ ಬಗ್ಗೆ ವರದಿಯಾಗಿದೆ.

ಈ ಒಂದು ಘಟನೆಯಲ್ಲಿ ಕಣ್ಮರೆಯಾದ ಬಾಲಕನನ್ನು ಮಾಡಾವು ಕಟ್ಟತ್ತಾರು ನಿವಾಸಿ ಹಂಝ ಎಂಬವರ ಮಗ ಹದಿನೇಳು ವರ್ಷದ ಬಾಲಕ ತಸ್ಲೀಮ್ ಎಂದು ಗುರುತಿಸಲಾಗಿದೆ.

ತನ್ನ ಗೆಳಯರ ಬಳಗದೊಂದಿಗೆ ಸಂಜೆ ಸಮಯ ಅರಿಕ್ಕಿಲ ಸಮೀಪದ ಎರಕ್ಕಳ ಎಂಬಲ್ಲಿರುವ ಹೊಳೆಗೆ ಈಜಲು ತೆರಳಿದ್ದ ಸಂದರ್ಭದಲ್ಲಿ ತಸ್ಲೀಮ್ ಎಂಬ ಯುವಕ ನೀರೊಳಗೆ ಮುಳುಗಿದ್ದಾನೆ ಎನ್ನಲಾಗಿದೆ . ಸ್ಥಳದಲ್ಲಿ ನೂರಾರು ಮಂದಿ ಸೇರಿ ಹುಡುಕಾಟ ನಡೆಸಿದ್ದು ಇಂದು ಬೆಳಿಗ್ಗೆ ಬಾಲಕನ ಮೃತದೇಹ ಪತ್ತೆಯಾಗಿದ್ದು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮಧ್ಯಾಹ್ನ 1.30 ಗಂಟೆಗೆ ದಫನ ಕಾರ್ಯ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!