dtvkannada

ಕಬಕ: ಪುತ್ತೂರು ತಾಲೂಕಿನ ಕಬಕ ಬಳಿ‌ ಬಸ್ಸು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಒರ್ವ ಸ್ಥಳದಲ್ಲೇ ದಾರುಣ ಮೃತಪಟ್ಟ ಘಟನೆ ಇದೀಗ ನಡೆದಿದೆ.

ಮೃತಪಟ್ಟ ಯುವಕನನ್ನು ಆಶಿಮ್ ಬಿಸಿರೋಡ್ ಎಂದು ಗುರುತಿಸಲಾಗಿದೆ ಎಂದು ತಿಳಿದು ಬಂದಿದೆ.

ಬಸ್ಸು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಬಸ್ಸಿನಡಿಗೆ ಎಸೆಯಲ್ಪಟ್ಟಿದ್ದು ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣ ಗುರುತಿಸಲಾಗದಷ್ಟು ಜಖಂ ಗೊಂಡಿದ್ದು ಒರ್ವ ಯುವಕನನ್ನು ಬಲಿಪಡೆದುಕೊಂಡಿದೆ.ವೀಡಿಯೋ ನೋಡಿ👇🏻

ಅಪಘಾತದ ಬಗ್ಗೆ‌ ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಾಗಿದ್ದು ಅಪಘಾತದ ಬಳಿ ನೂರಾರು ಸಾರ್ವಜನಿಕರು ಸೇರಿಕೊಂಡಿದ್ದು ಬಸ್ಸು ರಸ್ತೆ‌ ಬಿಟ್ಟು ಕಣಿವೆಗೆ ಜಾರಿ ನಿಂತಿದೆ ಎನ್ನಲಾಗಿದೆ.ಯುವಕನನ್ನು ಚಿಕಿತ್ಸೆಗಾಗಿ ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಸಾಗಿಸಲಾಗಿದ್ದು ಆದಾಗಲೇ ಫಲಕಾರಿಯಾಗದೆ ಮೃತಪಟ್ಟಿದ್ದು ಮರಣೋತ್ತರ ಪರೀಕ್ಷೆಗೆ ಅಲ್ಲಿಂದ ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.

By dtv

Leave a Reply

Your email address will not be published. Required fields are marked *

error: Content is protected !!