dtvkannada

ಬೆಳ್ತಂಗಡಿ: ತುಮಕೂರುವಿನ ಕುಚ್ಚoಗಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಬೆಳ್ತಂಗಡಿ ಉಜಿರೆ ನಿವಾಸಿಗಳಾದ ಇಸಾಕ್(56) ಸಾಹುಲ್ ಹಮೀದ್ (45) ಸಿದ್ದಿಕ್ (34) ಮೂವರ ಮೃತದೇಹವನ್ನು ಡಿ ಎನ್ ಎ ಪರೀಕ್ಷೆ ಮತ್ತು ಪೊಲೀಸ್ ತನಿಖೆ ಪೂರ್ತಿಗೊಳಿಸಿ ಒಂದು ವಾರಗಳ ಬಳಿಕ ಇಂದು ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು.

ಉಜಿರೆ ಜುಮಾ ಮಸೀದಿಯಲ್ಲಿ ಅಂತಿಮ ಕ್ರಿಯೆ ನಡೆಯಿತು.ಅಂತಿಮ ದರ್ಶನಕ್ಕೆ ಸಾವಿರಾರು ಮಂದಿ ಜನ ಸೇರಿದ್ದು ಮೂವರು ಯುವಕರ ಹಠಾತ್ ಮರಣದ ವಾರ್ತೆ ಕೇಳಿ ಇಡೀ ಊರಿಗೆ ಊರೇ ಕಣ್ಣೀರಿನಲ್ಲಿ ಮುಳುಗಿದೆ.
ಕಳೆದ ಒಂದು ವಾರಗಳಿಂದ ಊರಿಗೆ ಊರೇ ಸ್ಮಶಾನ ಮೌನ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನವಂತೂ ಮುಗಿಲು ಮುಟ್ಟಿದೆ.

ಒಂದು ವಾರಗಳ ಹಿಂದೆ ಕಳೆದ ಶುಕ್ರವಾರ ಮೂವರ ಮೃತದೇಹ ಸಂಪೂರ್ಣ ಸುಟ್ಟ ರೀತಿಯಲ್ಲಿ ತುಮಕೂರು ಕುಚ್ಚoಗಿ ಕೆರೆಯ ಬಳಿ ಅವರಿದ್ದ ಕಾರಿಗೆ ಬೆಂಕಿ ಹಾಕಿ ಕೊಂದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.ಈ ಬಗ್ಗೆ 6 ಜನರನ್ನು ಪೊಲೀಸರು ಬಂಧಿಸಿದ್ದು ತನಿಖೆ ಪ್ರಗತಿಯಲ್ಲಿದೆ.

By dtv

Leave a Reply

Your email address will not be published. Required fields are marked *

error: Content is protected !!