dtvkannada

ಪುತ್ತೂರು: ದ.ಕನ್ನಡ ಲೋಕಸಭಾ ಚುನಾವಣೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿ ಕಾಂಗ್ರೆಸಿನ ಅನುಭವಿ ನಾಯಕ ಹೇಮನಾಥ ಶೆಟ್ಟಿ ಕಾವು ಅವರನ್ನು ನೇಮಿಸಲಾಗಿದೆ ಎಂದು ತಿಳಿದು ಬಂದಿದೆ.

ಶ್ರೀಯುತರು ಈಗಾಗಲೇ ಹಲವಾರು ಚುನಾವಣೆಯಲ್ಲಿ ಉಸ್ತುವಾರಿಯಾಗಿ, ಪ್ರಚಾರಕರಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು ಕರ್ನಾಟಕವಲ್ಲದೇ,ಕೇರಳ,ಕೊಡಗು ಭಾಗದಲ್ಲಿ ಕೂಡ ಉಸ್ತುವಾರಿಯನ್ನು ಹೊತ್ತುಕೊಂಡು ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ನಾಯಕರ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ಅಶೋಕ್ ರೈಯವರ ಚುಣಾವಣೆ ಪ್ರಚಾರದಲ್ಲಿ ಹಗಲು ರಾತ್ರಿ ಎಂದು ನೋಡದೆ ಪ್ರಚಾರ ನಡೆಸಿ ಅವರ ಗೆಲುವಲ್ಲಿ ಪ್ರಮುಖ ಪಾತ್ರದಾರಿಯಾಗಿ ಗುರುತಿಸಿಕೊಂಡಿದ್ದರು.

ವಿಶೇಷವೆಂದರೆ ಕಾವು ಹೇಮನಾಥ ಶೆಟ್ಟಿ ಯಾರ ಪರ ಪ್ರಚಾರ ಈ ಮೊದಲು ನಡೆಸಿದ್ದರೋ ಅವರೆಲ್ಲರೂ ಶಾಸಕರಾಗಿ ವಿಧಾನಸಭೆ ಏರಿದ್ದರು.ಇದಿಗ ದ.ಕನ್ನಡ ಲೋಕಸಭಾ ಚುನಾವಣೆಯಲ್ಲಿ ಪದ್ಮರಾಜ್ ರಾಮಯ್ಯ ಪರ ಪ್ರಚಾರ ನಡೆಸಲಿದ್ದು ಪುತ್ತೂರಿನ ಉಸ್ತುವಾರಿಯನ್ನು ಕೈಗೆತ್ತಿಕೊಂಡಿದ್ದು ಈ ಭಾರಿಯ ಅದೃಷ್ಟ ಯಾವ ರೀತಿ ಇದೆ ಎಂದು ಕಾದು ನೋಡಬೇಕಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!