dtvkannada

ಬೆಂಗಳೂರು: ಬಿಜೆಪಿ ಜೆಡಿಎಸ್ ಮೈತ್ರಿ ಆಗುತ್ತಿದ್ದಂತೆ ಇದೀಗ ಜೆಡಿಎಸ್ ಗೆ ರಾಜೀನಾಮೆ ನೀಡಿ ರಾಜ್ಯ ನಾಯಕರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಇದು ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಜೆಡಿಎಸ್ ಗೆ ಅತೀ ದೊಡ್ಡ ಆಘಾತವಾಗಿದೆ.

ಮಾಜಿ ಸಚಿವರಾದ ಶ್ರೀ ಎನ್.ಎಂ.ನಬಿ ಅವರ ನೇತೃತ್ವದಲ್ಲಿ ಜೆಡಿಎಸ್ ರಾಜ್ಯ ಮಹಿಳಾ ಕಾರ್ಯದರ್ಶಿ ನಜ್ಮಾ ನಝಿರ್ ಚಿಕ್ಕ ನೇರಳೆ  ಜೆಡಿಎಸ್ ನಾಯಕರಾದ ಶ್ರೀ ಎನ್.ಎಂ. ನೂರ್ ಅಹಮ್ಮದ್, ಶ್ರೀ ಮುನಾಫ್ ಮಿರ್ಜಾನ್’ಕರ್, ಶ್ರೀ ಇನಾಯತ್ ಉಲ್ಲಾ ಶಾಬಂದ್ರಿ, ಶ್ರೀ ಸೈಯದ್ ಮುಜಿಬ್, ಶ್ರೀ ಫಯಾಜ್ ಅಹಮ್ಮದ್ ಶೇಖ್ ಅವರು ಸೇರಿದಂತೆ ಇನ್ನು ಅನೇಕರು ಇಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.

ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಪಕ್ಷ ಸೇರಿರುವುದಾಗಿ ಡಿಕೆಶಿ ಟ್ವಿಟ್ ಮಾಡಿದ್ದಾರೆ. ಎಲ್ಲರನ್ನೂ ಆತ್ಮೀಯವಾಗಿ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡು ಶುಭ ಹಾರೈಸಿದರು ಎನ್ನಲಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!