dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತೀವ್ರ ಮಳೆ ಹಿನ್ನಲೆ ನಿನ್ನೆ ಕುತ್ತಾರುನಲ್ಲಿ ತಡೆಗೋಡೆ ಕುಸಿದು ನಾಲ್ಕು ಜನ ಮೃತಪಟ್ಟ ಬೆನ್ನಲ್ಲೇ ಇದೀಗ ಮನೆ ಮೇಲೆ ಧರೆ ಕುಸಿದು ಮನೆಯೊಳಗಿದ್ದವರು ಅಲ್ಪದರಲ್ಲೇ ಪಾರಾದ ಘಟನೆ ಇದೀಗ ಮುಂಜಾನೆ ವೇಳೆ ಪುತ್ತೂರು ಸಮೀಪದ ಬನ್ನೂರು ಎಂಬಲ್ಲಿ ನಡೆದಿದೆ.

ಮಜೀದ್ ಎಂಬವರ ಮನೆ ಮೇಲೆ ಏಕಾ ಏಕಿ ಧರೆ ಉರುಳಿ ಬಿದ್ದಿದ್ದು ಮನೆಯೊಳಗಡೆ ನಿದ್ದೆಯಲ್ಲಿದ್ದ ಮಜೀದ್ ರವರ ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿದ್ದರು ಎಂದು ತಿಳಿದು ಬಂದಿದೆ.
ತಕ್ಷಣವೇ ಮಣ್ಣಿನಡಿಯಿಂದ ಎಳೆದು ರಕ್ಷಿಸಿರುವುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

'; } else { echo "Sorry! You are Blocked from seeing the Ads"; } ?>

ಕಂದಾಯ ಸಚಿವರು ನಿನ್ನೆ ಕುತ್ತಾರು ಅವಘಡ ಸ್ಥಳಕ್ಕೆ ಭೇಟಿ ನೀಡಿ ಅಪಾಯoಚಿನ ಮನೆಯನ್ನು ಪರಿಶೀಲಿಸುವಂತೆ ಪಂಚಾಯತ್ ಗೆ ಆದೇಶ ನೀಡಿದ್ದಾರೆ.
ನಾಲ್ವರು ಮೃತಪಟ್ಟ ಬೆನ್ನಲ್ಲೇ ಈವೊಂದು ಘಟನೆ ಮತ್ತೊಮ್ಮೆ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!