dtvkannada

'; } else { echo "Sorry! You are Blocked from seeing the Ads"; } ?>

ತೆಕ್ಕಾರು: ರಣ ಭೀಕರ ಮಳೆಗೆ ಮನೆಯೊಂದರ ಮೇಲ್ಚಾವಣಿ ಸಂಪೂರ್ಣ ಹಾನಿಯಾದ ಘಟನೆ ತೆಕ್ಕಾರುವಿನ ಬೋಳಲುಗುಡ್ಡೆ ಎಂಬಲ್ಲಿ ಸಂಭವಿಸಿದೆ.ಅತೀಜಮ್ಮ ಎಂಬವರ ಮನೆಯ ಮೆಲ್ಚಾವಣಿ ಬೀಳುವ ಸ್ಥಿತಿ ಎದುರಾಗಿದ್ದು ತಕ್ಷಣವೇ ಮಾಹಿತಿ ಅರಿತು ಸ್ಥಳೀಯ ಜನಪ್ರತಿನಿದಿಗಳು ಮತ್ತು ಗ್ರಾಮ  ಲೆಕ್ಕಾಧಿಕಾರಿಗಳು  ಸ್ಥಳಕ್ಕೆ ಭೇಟಿ ನೀಡಿ ಮನೆಯಲ್ಲಿದ್ದವರನ್ನು  ಸ್ಥಳಾoತರಿಸಲಾಗಿದೆ.

ಮನೆಯ ಒಳಗಡೆ ಸಂಪೂರ್ಣವಾಗಿ ಸೋರುತ್ತಿದ್ದು,
ಇಟ್ಟಿಗೆಯಿಂದ ಕಟ್ಟಿದ ಮನೆಯಾಗಿರುವುದರಿಂದ ಯಾವ ಸಮಯದಲ್ಲಿ ಏನೂ ಬೇಕಾದರೂ ಸಂಭವಿಸಬಹುದು ಆ ನಿಟ್ಟಿನಲ್ಲಿ ಮನೆಗೆ ಭೇಟಿ ನೀಡಿ ಮನೆಯವರನ್ನು ಸ್ಥಳಾoತರಿಸಲಾಗಿದೆ, ಈ ಬಗ್ಗೆ ವರದಿ ರಚಿಸಿ ತಹಸೀಲ್ದಾರ್ ರಿಗೆ ಕಳುಹಿಸಿ ಕೊಡಲಾಗಿದೆ ಎಂದು ಬಾರ್ಯ ತೆಕ್ಕಾರು ಗ್ರಾಮ ಲೆಕ್ಕಾಧಿಕಾರಿ ಶ್ರೀ ಸಾಕಮ್ಮ ಡಿ.ಟಿವಿ ಜೊತೆ ತಿಳಿಸಿದ್ದಾರೆ.
ತೆಕ್ಕಾರು ಗ್ರಾಮ ಪಂಚಾಯತ್  ಅಧ್ಯಕ್ಷರು, ಪಂಚಾಯತ್ ಸದಸ್ಯ ಅಬ್ದುಲ್ ರಝಕ್,ಗ್ರಾಮ ಪಂಚಾಯತ್ ಸದಸ್ಯ ಹಕೀಮ್ ತನಲ್ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!