ಪುತ್ತೂರು : ಸಾಲ್ಮರ – ಕೆರೆಮೂಲೆ ನಿವಾಸಿ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ ವಾಲ್ಟರ್ ರವರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ತತ್ವ ಮತ್ತು ಸಿದ್ದಾಂತವನ್ನು ಒಪ್ಪಿಕೊಂಡು SDPI ಪುತ್ತೂರು ವಿಧಾನ ಸಭಾ ಕ್ಷೇತ್ರ ಅದ್ಯಕ್ಷರಾದ ಸಿದ್ದೀಕ್ ಪುತ್ತೂರು ಇವರ ಸಮ್ಮುಖದಲ್ಲಿ SDPI ಪಕ್ಷಕ್ಕೆ ಸೇರ್ಪಡೆಗೊಂಡರು.
ಇವರನ್ನು ಪುತ್ತೂರು ನಗರ ಅದ್ಯಕ್ಷರಾದ ಸಿರಾಜ್ ಎ.ಕೆ ಪಕ್ಷದ ದ್ವಜವನ್ನು ನೀಡುವ ಮೂಲಕ ಸ್ವಾಗತಿಸಿದರು. ಈ ಸಂದರ್ಭದಲ್ಲಿ SDPI ಸಾಲ್ಮರ ವಾರ್ಡ್ ಸಮಿತಿ ಅಧ್ಯಕ್ಷ ನವಾಝ್ ಪಿ.ಎಸ್,ಕೆರೆಮೂಲೆ ಬೂತ್ ಅಧ್ಯಕ್ಷ ರಝ್ಝಾಕ್ ಜನತಾ, ಕಾರ್ಯದರ್ಶಿ ಮುಸ್ತಪ ಕೆರೆಮೂಲೆ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.