dtvkannada

'; } else { echo "Sorry! You are Blocked from seeing the Ads"; } ?>

ಮಂಗಳೂರು: ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ 9ನೇ ವಾರ್ಷಿಕೋತ್ಸವವು ಎಪ್ರಿಲ್ 29 ರಂದು ಜರುಗಿತು. ಇದರ ಸಂಭ್ರಮವನ್ನು ಸಂಸ್ಥೆಯು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿರುವ ಬಡ ರೋಗಿಗಳಿಗೆ ಮತ್ತು ಕಾರುಣ್ಯ ಸೇವಾಶ್ರಮಕ್ಕೆ ತೆರಳಿ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.

ಕಳೆದ ಎಂಟು ವರ್ಷಗಳಿಂದ ಸೇವಾ ರಂಗದಲ್ಲಿ ತೊಡಗಿಸಿಕೊಂಡಿರುವ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯು, ಮಂಗಳೂರು ಮಾತ್ರವಲ್ಲದೆ ದೇಶ-ವಿದೇಶಗಳಲ್ಲೂ ಕಾರ್ಯಚರಿಸುತ್ತಿದೆ. ಈಗಾಗಲೇ 350 ರಷ್ಟು ರಕ್ತದಾನ ಶಿಬಿರಗಳನ್ನು ಆಯೋಜಿಸಿರುವ ಸಂಸ್ಥೆಯು ಸಾವಿರಾರು ಬಡರೋಗಿಗಳ ಆಶ್ರಯವಾಗಿದೆ.

'; } else { echo "Sorry! You are Blocked from seeing the Ads"; } ?>

ಇದೀಗ ಸಂಸ್ಥೆಯು 9ನೇ ವರ್ಷಕ್ಕೆ ಕಾಲಿಟ್ಟಿದ್ದು, ಇನ್ನಷ್ಟು ಶಿಬಿರಗಳು ಮತ್ತು ಸಮಾಜಸೇವೆಯ ಉದ್ದೇಶದೊಂದಿಗೆ ಮುನ್ನಡೆಯುತ್ತಿದೆ.

ಹಣ್ಣು ಹಂಪಲು ವಿತರಣಾ ಕಾರ್ಯಕ್ರಮದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಕೋಶಾಧಿಕಾರಿ ಹಮೀದ್ ಪಜೀರ್, ಶಾಹುಲ್ ಹಮೀದ್ ಕಾಶಿಪಟ್ನ, ಇಂತಿಯಾಝ್ ಜೋಕಟ್ಟೆ, ಸಿರಾಜ್ ಫಜೀರ್, ಅರ್ಶಾದ್ ಬಾಂಬಿಲ, ಸಲಾಂ ಚೊಂಬುಗುಡ್ಡೆ, ದಾವೂದ್ ಬಜಾಲ್, ರೋಷನ್ ಭಾಗವಹಿಸಿದ್ದರು.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!