dtvkannada

ಬೆಳಗಾವಿ: ಡಾಬಾದಲ್ಲಿ ಊಟ ಮಾಡಿ ವಾಪಸ್ ಮನೆಗೆ ಬರುತ್ತಿದ್ದಾಗ ನಿಂತಿದ್ದ ಲಾರಿಗೆ ಹಿಂಬದಿಯಿಂದ ದ್ವಿಚಕ್ರ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಬೆಳಗಾವಿ ನಗರದ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬುಧವಾರ ಮಧ್ಯರಾತ್ರಿ ರಾಷ್ಟ್ರೀಯ ಹೆದ್ದಾರಿ ಬಳಿಯ ಯಮನಾಪುರ ಸಮೀಪದ ಬರ್ಡೆ ಹಾಗೂ ಗಾವಕರಿ ಡಾಬಾ ಎದುರು ಸಂಭವಿಸಿದೆ.

ಚವಾಟ ಗಲ್ಲಿಯ ಶ್ರೀನಾಥ ದಿಗಂಬರ ಪವಾರ (21 ವ) ಹಾಗೂ ಸದಾಶಿವ ನಗರದ ರಚಿತ್ ರಂಜನ್ ಡುಮಾವತ್ (21 ವ) ಮೃತಪಟ್ಟಿ ದುರ್ದೈವಿಗಳು.
ಇಲ್ಲಿನ ಲಿಂಗರಾಜ ಕಾಲೇಜಿನಲ್ಲಿ ಬಿ.ಕಾಂ. ತೃತೀಯ ವರ್ಷದಲ್ಲಿ ಓದುತ್ತಿದ್ದ ಈ ಇಬ್ಬರೂ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.

ಮೃತ ಯುವಕ ಶ್ರೀನಾಥ ಅವರ ತಂದೆ ದಿಗಂಬರ ಪವಾರ ಬೆಳಗಾವಿಯ ಮರಾಠಾ ಕೋ ಆಪ್ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!