ಬೊಮ್ಮಶೆಟ್ಟಳ್ಳಿ : ಗೌರಿ ಗಣೇಶ ಹಬ್ಬದ ಸಲುವಾಗಿ ಸಿ. ಎನ್. ಆರ್ ಹಿತಚಿಂತನ ಚಾರಿಟಬಲ್ ಟ್ರಸ್ಟ್ ವತಿಯಿಂದ ಬೊಮ್ಮಶೆಟ್ಟಳ್ಳಿ ಗ್ರಾಮದ ಮಹಿಳೆಯರಿಗೆಲ್ಲ ಶುಕ್ರವಾರ ಬಾಗೀನ ಮತ್ತು ಪರಿಸರ ಕಳಕಳಿಗಾಗಿ ಗಿಡಗಳನ್ನು ಕೊಡಲಾಯಿತು.
ಗೋಪಾಲಪುರ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾದ ಚಂದ್ರಶೇಖರ್ ಮಾತಾನಾಡಿ ನೀವೆಲ್ಲರೂ ನಮ್ಮ ಬಂಧುಗಳೇ ಏನೇ ಕಷ್ಟ ಬಂದರೂ ಹೆದರಬೇಡಿ ನಿಮ್ಮ ಜೊತೆಯಲ್ಲಿ ನಾವಿರುತ್ತೇವೆ ಎಂದೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಬೈಲಮೂರ್ತಿ, ಮಹದೇವಯ್ಯ, ಪೃಥ್ವಿ ಶಶಾಂಕ್, ಚಿಕ್ಕಣ್ಣ, ಪ್ರೇಮ ರತ್ನಮ್ಮ ಉಪಸ್ಥಿತರಿದ್ದರು.