dtvkannada

'; } else { echo "Sorry! You are Blocked from seeing the Ads"; } ?>

ಬಂಟ್ವಾಳ: ಯಾವುದೇ ಧರ್ಮವೂ ಕೂಡ ಇಲ್ಲಿ ಅಶಾಂತಿಗೆ ಕರೆ ಕೊಟ್ಟಿಲ್ಲ ಇಲ್ಲಿಯ ದೇವಸ್ಥಾನ ಇಲ್ಲಿಯ ಮಸೀದಿಗಳು ಇಲ್ಲಿ ಸೌಹಾರ್ದತೆಯನ್ನಷ್ಟೇ ಉಳಿಸಿಕೊಂಡಿವೆ ಆದರಿಂದಲೇ ಅಜಿಲಮೊಗರು ಹೆಚ್ಚಿನ ಕೋಮು ಸಾಮರಸ್ಯವನ್ನು ಉಳಿಸಿಕೊಂಡು ಬಂದಿವೆ ಎಂದು ಸೆಯ್ಯದ್ ಆಟಕೋಯ ತಂಗಳ್ ಕುಂಬೋಲ್ ಅಜಿಲಮೊಗರು ಜುಮಾ ಮಸೀದಿಯಲ್ಲಿ   ಗುರುವಾರ ನೂತನವಾಗಿ ನಿರ್ಮಿಸಿದ ಮಿನಾರವನ್ನು ಉದ್ಘಾಟಿಸಿ ಅವರು ಮಾತಾಡಿದರು.

ಸಮಾಜ ಕಟ್ಟುವ ಕೆಲಸದಲ್ಲಿ ಯುವಕರು ಮುಂದೆ ಬರಬೇಕಿದೆ ಆ ನಿಟ್ಟಿನಲ್ಲಿ ಸ್ವಸ್ಥ ಸಮಾಜ ಕಟ್ಟುವ ಕೆಲಸ ಆಗಬೇಕಿದೆ ಎಂದು ವಿಧಾನಸಭಾಧ್ಯಕ್ಷ ಯು ಟಿ ಖಾದರ್ ರವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಮಸೀದಿಗಳ ಕುರುಹುಗಳಾಗಿವೆ  ಮಿನಾರ
ಧಾರ್ಮಿಕ ಕೇಂದ್ರಗಳು ಇಲ್ಲಿನ ಸೌಹಾರ್ದತೆಯ ಕೇಂದ್ರಗಳು ಎಂದು ಸ್ಥಳೀಯ ಖತೀಬ್ ತ್ವಾಹ ಸಹದಿ ಅಜಿಲಮೊಗರು ಹೇಳಿದರು.

'; } else { echo "Sorry! You are Blocked from seeing the Ads"; } ?>

ಮಾಜಿ ಸಚಿವ ರಮಾನಾಥ ರೈ ಮಾತನಾಡಿ  ತಿಳಿದವರಿಂದ ಇಲ್ಲಿ ಕೋಮು ಗಲಭೆ ನಡೆಯುತ್ತಿದೆ ಅಕ್ಷರ ಜ್ಞಾನವಿಲ್ಲದವರು ಅವರಷ್ಟಕ್ಕೇ ಇರುತ್ತಾರೆ ಉಳಿದವರು ಇಲ್ಲಿ ಸೌಹಾರ್ದತೆಗೆ ದಕ್ಕೆ ತರುವ ಕೆಲಸ ಮಾಡುತ್ತಾರೆ. ಅಜಿಲಮೊಗರುವಿನ ಸೌಹಾರ್ದ ಸೇತುವೆಯ ನಿಧಾನಗತಿಗೆ ಇಲ್ಲಿನ ಅಧಿಕಾರಿಗಳೇ ನೇರ ಹೊಣೆ ಅವರ ಮಂದಗತಿಯ ಕೆಲಸಗಳಿಂದ ಇದು ವಿಳಂಬವಾಗುತ್ತಿದೆ ಎಂದು ಅವರು ಹೇಳಿದರು.

'; } else { echo "Sorry! You are Blocked from seeing the Ads"; } ?>

ಇದೇ ವೇಳೆ ಅಜಿಲಮೊಗರು ಮಸೀದಿಗೆ ಮಿನಾರವನ್ನು ಕೊಡುಗೆಯಾಗಿ ನೀಡಿದ ಇಬ್ರಾಹಿಂ ಗಡಿಯಾರರವರನ್ನು ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಇಬ್ರಾಹಿಂ ರವರು ನನ್ನ ಹುಟ್ಟೂರಿಗೆ ಸ್ತುತಿಃ ಅರ್ಹವಾದ ಸೇವೆ ನೀಡಲು ನನಗೆ ಸಾಧ್ಯವಾಗಿದ್ದಕ್ಕೆ ಸಂತೋಷ ತಂದಿದೆ.
ಇನ್ನಷ್ಟು ನನ್ನಿಂದಾಗುವ  ಸೇವೆಗಳು ನಾನು ಖಂಡಿತಾ ಈ ಊರಿಗೆ ನೀಡಲಿದ್ದೇನೆ ಎಂದು ಅವರು ಹೇಳಿದರು.

ಜಮಾಅತ್ ಅಧ್ಯಕ್ಷ ಪಿ ಬಿ ಅಬ್ದುಲ್ ಹಮೀದ್ ಹಾಜಿ ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದಲ್ಲಿ ಮೆಹ್ರೂಜ್ ಖಾನ್,  ಯು ಟಿ ಇಫ್ತಿಕಾರ್, ಎಸ್ ಎಂ ರಶೀದ್ ಹಾಜಿ, ನಾಸಿರ್ ಲಕ್ಕಿಸ್ಟಾರ್, ಜಿ ಇಬ್ರಾಹಿಂ. ಶ್ರೀ ಅಮರನಾಥ ಅಜಿಲ, ಪುರುಷೋತ್ತಮ್ ಶೆಟ್ಟಿ, ವಿಜಯ ಕುಮಾರ್ ಅಜಿಲ, ಶಿವಪ್ಪ ಪೂಜಾರಿ ,ಮುಹಮ್ಮದ್ ಕುಂಜಿ, ಪಿ ಬಿ ಮಹಮ್ಮದ್ ಸಿದ್ದಿಕ್, ಮುಹಮ್ಮದ್ ರಫೀಕ್ ಹಾಜಿ, ಆದಂ ಕುಂಜಿ ಹಾಗು ಮತ್ತಿತ್ತರು ಉಪಸ್ಥಿತರಿದ್ದರು.
ಜಮಾಅತ್ ಪ್ರಧಾನ ಕಾರ್ಯದರ್ಶಿ ಸಿನಾನ್ ಸಖಾಫಿ ಸ್ವಾಗತಿಸಿ ವಂದಿಸಿದರು.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!