ಬೆಂಗಳೂರು: ಆರ್ ಸಿ ಬಿ ವಿಜಯದ ಹಿನ್ನಲೆ ಇಂದು ಬೆಂಗಳೂರುನ ವಿಧಾನಸೌದ ದ ಬಳಿ ನಡೆದ ಸಂಭ್ರಮಾಚರಣೆ ವೇಳೆ ಕಾಲ್ತುಳಿತಕ್ಕೋಳಗಾಗಿ ಹತ್ತು ಮಂದಿ ಮೃತಪಟ್ಟಿದ್ದಾಗಿ ದೃಢವಾಗಿದೆ.

ವಿಧಾನಸೌದದ ಬಳಿ ಸರ್ಕಾರ ಹಮ್ಮಿಕೊಂಡಿದ್ದ ವಿಜಯೋತ್ಸವದ ವೇಳೆ ಅಪಾರ ಆರ್ ಸಿ ಬಿ ಅಭಿಮಾನಿಗಳು ಬಾಗವಹಿಸಿದ್ದು ಈ ವೇಳೆ ಜನ ಸಂಖ್ಯೆಯನ್ನು ನಿಯಂತ್ರಿಸಲು ಪೊಲೀಸರಿಗೂ ಹರಸಾಹಸದ ಕೆಲಸವಾಗಿತ್ತು ಅಭಿಮಾನಿಗಳ ಸಂಖ್ಯೆ ಹೆಚ್ಚಾದಂತೆ ಕಾಲ್ತುಳಿತ ಉಂಟಾಗಿದ್ದು 14 ವರ್ಷದ ವಿದ್ಯಾರ್ಥಿನಿ ಸಹಿತ 10 ಮಂದಿಗಳು ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ 47 ಮಂದಿ ಗಂಭೀರ ಗಾಯಗೊಂಡಿದ್ದಾರೆ.


ಮೃತದೇಹವನ್ನು ಮತ್ತು ಗಾಯಳುಗಳನ್ನು ವೀಕ್ಷಿಸಲು ಸಿ ಎಂ ಸಿದ್ದರಾಮಯ್ಯ ಗೃಹ ಸಚಿವ ಜಿ ಪರಮೇಶ್ವರ್ ಸಹಿತ ಸಚಿವರು ವೈದೇಹಿ ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಇನ್ನು ಅಸುನೀಗಿದ ಆರ್ ಸಿ ಬಿ ಅಭಿಮಾನಿಗಳ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ನೀಡುವುದಾಗಿ ಸಿ ಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೃತ ಕುಟುಂಬಗಳಿಗೆ ಹತ್ತು ಲಕ್ಷ ರೂ ಪರಿಹಾರ ನೀಡಲಿದ್ದೇವೆ.
ಅದೇ ರೀತಿ ಗಾಯಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೆ ಬರಿಸಲಿದೆ ಎಂದು ಅವರು ಹೇಳಿದರು.