dtvkannada

ಪುತ್ತೂರು, ಸೆ.24: ಪ್ರತಿಭಟನಾ ನಿರತ ಅಸ್ಸಾಂ ಜನರ ಮೇಲೆ ಪೋಲಿಸರಿಂದ ಗುಂಡೇಟು, ದೌರ್ಜನ್ಯ ಖಂಡಿಸಿ ಬದ್ರಿಯಾ ಜುಮಾ ಮಸೀದಿ ಸಂಟ್ಯಾರಿನಲ್ಲಿ ಭಿತ್ತಿ ಪತ್ರ ಹಿಡಿದು ಪ್ರತಿಭಟನೆ ನಡೆಯಿತು.

ಪ್ರತಿಭಟನಾ ನಿರತ ಅಸ್ಸಾಂಮಿನ ಗ್ರಾಮೀಣ ಜನರ ಮೇಲೆ ಸರ್ಕಾರಿ ಪ್ರಾಯೋಜಿತವಾಗಿ ಪೋಲಿಸರು ಗುಂಡೇಟು ನಡೆಸಿದ್ದು ಹಲವಾರು ಜನರು ಬಲಿಯಾಗಿದ್ದು ಹಾಗೂ ಕ್ರೂರ ವರ್ತನೆ ನಡೆಸಿ ಹಲ್ಲೆಗೈದಿದ್ದು ಖಂಡನೀಯ ಇದರ ವಿರುದ್ದ ಧ್ವನಿಯಾಗಬೇಕಾದದ್ದು ಸಮುದಾಯದ ಕರ್ತವ್ಯವಾಗಿದೆಯೆಂದು ಬದ್ರಿಯಾ ಜುಮಾ ಮಸೀದಿ ಸಂಟ್ಯಾರ್ ಖತೀಬರಾದ ಅಶ್ರಫ್ ದಾರಿಮಿ ಹೇಳಿದರು.

ಈ ಸಂದರ್ಭದಲ್ಲಿ ಬದ್ರಿಯಾ ಜುಮಾ ಮಸೀದಿ ಸಂಟ್ಯಾರ್ ಗೌರವಾಧ್ಯಕ್ಷರಾದ ಹಮೀದಾಲಿಸ್ ಸಂಟ್ಯಾರ್, ಕಾರ್ಯದರ್ಶಿ ಅಬೂಬಕ್ಕರ್ ಕಲ್ಲರ್ಪೆ, ಅನ್ಸಾರಿಯಾ ಯಂಗ್ಮೆನ್ಸ್ ಎಸೋಸಿಯೇಶನ್ ಅಧ್ಯಕ್ಷರಾದ ಶಾಫಿ ಸಂಟ್ಯಾರ್, ಕಾರ್ಯದರ್ಶಿಯಾದ ರಿಯಾಝ್ ಬಳಕ್ಕ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

By dtv

Leave a Reply

Your email address will not be published. Required fields are marked *

error: Content is protected !!