ಪ್ರತಿರೋಧ ಅಪರಾಧವಲ್ಲ, ಸದಾ ಮೌನ ಸಮಂಜಸವಲ್ಲ !
✍🏻ಕವಿ: ಸಿರಾಜುದ್ದೀನ್ ಪರ್ಲಡ್ಕ
ಹೆಣವನ್ನೇ ತುಳಿಯುವವರಯ್ಯಾ
ಇವರಿಗೆ ಸತ್ಯ ಯಾವ ಲೆಕ್ಕವಯ್ಯಾ !!
ಇದು ಇಂದು ನಿನ್ನೆಯ ವಿಕೃತಿಯಲ್ಲ
ಅಸುರ ಮನಸ್ಥಿತಿ ಸಂಘಿಗಳಿಗೆಲ್ಲ !!
ದೇಶ ಮೌನ ನಾನು ಮೌನಿ
ಮಾನವ ಕುಲಕ್ಕೇ ಇದು ಹಾನಿ !!
ನನ್ನ ನಿನ್ನ ಅಕ್ಕ ಪಕ್ಕ ಇದ್ದಾರೆಲ್ಲ
ಅಸ್ಸಾಮಿಗೆ ಮಾತ್ರ ಸೀಮಿತವಲ್ಲ !!
“ಪ್ರತಿಧ್ವನಿ” – ಬೀಳದಿರಲು ಇನ್ನೆಂದೂ ಹೆಣ
“ಪ್ರತಿರೋಧನೆ” – ತೀರಿಸಲು ಜೀವನದ ಋಣ !!
ಹೋರಾಟವು ಅನೀತಿಯ ವಿರುದ್ಧ
ಪ್ರತಿರೋಧವು ಅನ್ಯಾಯಕ್ಕೆ ವಿರೋಧ !!
ಪ್ರತಿರೋಧವು ಅಪರಾಧವಲ್ಲ
ಸದಾ ಮೌನವು ಸಮಂಜಸವಲ್ಲ !!