ಸುಳ್ಯ: ಗಾಂಧೀಜಿಯ 152ರ ಜನ್ಮದಿನಾಚರಣೆಯ ಪ್ರಯುಕ್ತ ಜೇಸೀ ಐ ಸುಳ್ಯ ಸಿಟಿ ಮತ್ತು ಬಿ.ಸಿ.ಎಂ ಹಾಸ್ಟೆಲ್ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ಗಾಂಧಿ ನಡಿಗೆ ಮತ್ತು ಸ್ವಚ್ಚತ ಕಾರ್ಯಕ್ರಮ ಬಿ.ಸಿ.ಎಂ ಹಾಸ್ಟೆಲ್ ಸುಳ್ಯ ಇಲ್ಲಿ ನಡೆಯಿತು.
ನಗರ ಪಂಚಾಯತ್ ಅಧ್ಯಕ್ಷರಾದ ವಿನಯ ಕುಮಾರ್ ಕಂದಡ್ಕ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಜೇಸೀ ಐ ಸುಳ್ಯ ಸಿಟಿ ಯ ಅಧ್ಯಕ್ಷರಾದ ಚಂದ್ರಶೇಖರ ಕನಕಮಜಲು ವಹಿಸಿದ್ದರು. ಅತಿಥಿಗಳಾಗಿ ಹಾಸ್ಟೆಲ್ ಮೇಲ್ವಿಚಾರಕಿ ಸುಹಾಸಿನಿ, ಜೂನಿಯರ್ ಜೇಸೀ ಅಧ್ಯಕ್ಷರಾದ ಪ್ರಜ್ವಲ್, ಜೇಸೀಐ ಉಪಾಧ್ಯಕ್ಷ ಬಶೀರ್ ಯು ಪಿ ಉಪಸ್ತಿತರಿದ್ದರು.
ನಿಶ್ಮಿತಾ ಸ್ವಾಗತಿಸಿ, ಧನುಶ್ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮ ದಲ್ಲಿ ಹಾಸ್ಟೆಲ್ ಸಿಬಂದ್ದಿ ವರ್ಗ ವಿದ್ಯಾರ್ಥಿಗಳು ಜೇಸೀ, ಜೂನಿಯರ್ ಸದಸ್ಯರು ಭಾಗವಹಿಸಿದ್ದರು