ಉಪ್ಪಿನಂಗಡಿ: ಹಿದಾಯತುಲ್ ಇಸ್ಲಾಂ ಮದ್ರಸಾ ತೆಕ್ಕಾರು
ನೂತನ SBS ಸಮಿತಿಗೆ ಮದ್ರಸಾ ಹಾಲ್ ನಲ್ಲಿ ಚಾಲನೆ ನೀಡಲಾಯಿತು.
ನೂತನ ಸಮಿತಿಯ ಅಧ್ಯಕ್ಷರಾಗಿ ಹಾಶಿರ್ ನಶೀಫ್, ಪ್ರಧಾನ ಕಾರ್ಯದರ್ಶಿಯಾಗಿ ಜುನೈದ್, ಕೋಶಾಧಿಕಾರಿಯಾಗಿ ಉಸಾಮ ಆಯ್ಕೆಯಾದರು. ಸಮಿತಿಯೂ ಸುಮಾರು 15 ಮಂದಿಗಳನ್ನೊಳಗೊಂಡಿದ್ದು ಉಪಾಧ್ಯಕ್ಷರಾಗಿ ರಾಝಿಕ್ ಮತ್ತು ಶಹೀರ್ ಅಲಿ, ಕಾರ್ಯದರ್ಶಿಗಳಾಗಿ ನಿಝಾಂ ಮತ್ತು ಉನೈಸ್ ರವರನ್ನು ಆಯ್ಕೆ ಮಾಡಲಾಯಿತು.
ನೂತನ ಕಾರ್ಯಕಾರಿಣಿ ಸದಸ್ಯರಾಗಿ ಮಹ್ಶೂಕ್, ಅರ್ಮಾನ್, ಹಾದಿರ್, ಶಮ್ಮಾಸ್, ಅನಸ್, ಮುಸ್ತಫಾ, ಆಸಿಫ್ ಟಿ.ಕೆ, ನಿಝಾಂ ಟಿ.ಹೆಚ್ ರವರು ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಮದ್ರಸಾ ಪ್ರಿನ್ಸಿಪಾಲ್ ಇಸ್ಹಾಕ್ ಮದನಿ ಅಳಕ್ಕೆ ಅಧ್ಯಕ್ಷತೆ ವಹಿಸಿದರು.
ಸ್ಥಳೀಯ ಖತೀಬ್ ಹಂಝ ಸಖಾಫಿ ಕಾರ್ಯಕ್ರಮವ ಉದ್ಗಾಟಿಸಿದರು
ಮದ್ರಸಾ ಮುಅಲ್ಲಿಂ ಉಸ್ಮಾನ್ ಮುಸ್ಲಿಯಾರ್ ಉಪಸ್ಥಿತರಿದ್ದರು.
ಹಾಶಿರ್ ನಶೀಫ್ ಸ್ವಾಗತಿಸಿ, ಜುನೈದ್ ವಂದಿಸಿದರು.