dtvkannada

ಉತ್ತರಪ್ರದೇಶ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಅಜಯ್​ ಮಿಶ್ರಾ ಪುತ್ರ ಆಶೀಶ್​ ಮಿಶ್ರಾ ರಿಗೆ ಉತ್ತರಪ್ರದೇಶ ಪೊಲೀಸರು ಇಂದು ಸಮನ್ಸ್​ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. 

ಇನ್ನು ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಈಗಾಗಲೇ ಆಶೀಶ್​ ಮಿಶ್ರಾ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಅಂದು ರೈತರಿಗೆ ಡಿಕ್ಕಿ ಹೊಡೆದ ಬೆಂಗಾವಲು ವಾಹನದಲ್ಲಿ ಇದ್ದ ಆಶೀಶ್​ ಪಾಂಡೆ ಮತ್ತು ಲವಕುಶ್​ ಎಂಬುವರನ್ನು ಇಂದು ಬಂಧಿಸಲಾಗಿದೆ.

ಇವರಿಬ್ಬರೂ ಆಶೀಶ್​ ಮಿಶ್ರಾ ಆಪ್ತರೂ ಹೌದು ಎಂದು ಲಖನೌ ರೇಂಜ್​​ನ ಐಜಿ ಲಕ್ಷ್ಮೀ ಸಿಂಗ್​ ತಿಳಿಸಿದ್ದಾರೆ.  ಲಖಿಂಪುರ ಖೇರಿಯಲ್ಲಿ ರೈತರತ್ತ ಕಾರು ಹರಿದ ಪ್ರಕರಣದಲ್ಲಿ ತಮ್ಮ ಪಾತ್ರವೇನೂ ಇಲ್ಲ ಎಂದು ಆಶೀಶ್​ ಮಿಶ್ರಾ ಹೇಳಿಕೊಂಡಿದ್ದಾರೆ.

ನಾನು ಘಟನೆ ನಡೆದಾಗ ಲಖಿಂಪುರ ಖೇರಿಯಲ್ಲಿ ಇರಲಿಲ್ಲ.  ಬೆಳಗ್ಗೆ 9ಗಂಟೆಯಿಂದಲೂ ಬೇರೆ ಒಂದು ಕಾರ್ಯಕ್ರಮದಲ್ಲಿ ಇದ್ದೆ ಎಂದಿದ್ದಾರೆ. ಹಾಗೇ, ಕೇಂದ್ರ ಸಚಿವ ಅಜಯ್​ ಮಿಶ್ರಾ ಕೂಡ ಇದನ್ನೇ ಹೇಳಿದ್ದಾರೆ. ಹಾಗೂ ಒಮ್ಮೆ ನನ್ನ ಪುತ್ರ ಇರುವುದು ಸಾಬೀತಾದರೆ ತಾವು ರಾಜೀನಾಮೆ ನೀಡುವುದಾಗಿಯೂ ಹೇಳಿಕೊಂಡಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!