dtvkannada

ಪುತ್ತೂರು: ಮುಹಿಯುದ್ದೀನ್ ಜುಮ್ಮಾ ಮಸ್ಜಿದ್ ಪರ್ಲಡ್ಕ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಹ ಸಂಸ್ಥೆ ESSYS ಇದರ ವಾರ್ಷಿಕ ಮಹಾಸಭೆಯು ದಿನಾಂಕ 03.10 2021 ರಂದು ನಡೆಯಿತು. ಮಸೀದಿಯ ಖತೀಬರಾದ ಅಬ್ದುರ್ರಶೀದ್ ರಹ್ಮಾನಿ ಅಧ್ಯಕ್ಷತೆಯಲ್ಲಿ ದುವಾಶೀರ್ವಚನದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

2020-21 ನೇ ಸಾಲಿನ ಕಮಿಟಿಯ ವಿಸರ್ಜನೆಯ ಬಳಿಕ ನೂತನ ಸಮಿತಿಯನ್ನು ರಚಿಸಲಾಯಿತು. 21 ಜನರನ್ನೊಳಗೊಂಡ ಸಮಿತಿಯಲ್ಲಿ ಅಹ್ಮದ್ ತ್ವಾಹಾರವರನ್ನು ಅಧ್ಯಕ್ಷರಾಗಿ ಮತ್ತು ಮುಝಮ್ಮಿಲ್ ರವನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ನೌಫಲ್, ಜೊತೆಕಾರ್ಯದರ್ಶಿಗಳಾಗಿ ಅನಸ್ ಮತ್ತು ತ್ವಾಹ, ಕೋಶಾಧಿಕಾರಿಯಾಗಿ ಸುಹೈಲ್ ಆಯ್ಕೆಗೊಂಡರು. ಜಮಾಅತ್ ಕಮಿಟಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸಹಿತ ಹಲವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

By dtv

Leave a Reply

Your email address will not be published. Required fields are marked *

error: Content is protected !!