dtvkannada

ಪುತ್ತೂರು: ಬಡಗನ್ನೂರು ಸಮೀಪದ ಮುಂಡೋಳೆ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಮುಂಡೋಳೆ ನಿವಾಸಿಯಾಗಿರುವ ಪಟ್ಟೆ ಅದಂ(56) ರವರು ಇದೀಗ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃದು ಸ್ವಭಾವದ ವ್ಯಕ್ತಿಯಾಗಿದ್ದ ಇವರು ಜೀವನ ಮಾರ್ಗಕ್ಕಾಗಿ ಬೀಡಿ ಬ್ರಾಂಚ್ ಅನ್ನು ನಡೆಸುತ್ತಿದ್ದರು. ಇತ್ತೀಚಿನ ಪ್ರಕರಣವೊಂದರಲ್ಲಿ ತೀರಾ ಅಸ್ವಸ್ಥತೆ ಅನುಭವಿಸಿದ್ದರು ಮತ್ತು ಕೆಲ ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು ಎಂದು ಹೇಳಲಾಗಿದೆ
ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತರು ಪತ್ನಿ, 6 ಗಂಡು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ..

By dtv

Leave a Reply

Your email address will not be published. Required fields are marked *

error: Content is protected !!