ಪುತ್ತೂರು: ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಭೀಕರ ಅಪಘಾತ ನಡೆದ ಘಟವೆ ಪುತ್ತೂರು ಸಮೀಪದ ಮೊಟ್ಟೆತ್ತಡ್ಕದಲ್ಲಿ ಸಂಜೆ ಹೊತ್ತು ನಡೆದಿದೆ.
![](http://dtvkannada.in/wp-content/uploads/2021/11/IMG-20211109-WA0024-1-1024x461.jpg)
ಲಾರಿ ಮತ್ತು ಆಕ್ಟೀವಾ ನಡುವೆ ನಡೆದ ಭೀಕರ ಅಪಘಾತದಲ್ಲಿ ದ್ವಿಚಕ್ರ ಸವಾರ ಮೂಲತಃ ಕೈಕಾರ ನಿವಾಸಿಯಾದ ವಸಂತ್ ರೈ ಬಳ್ಳಮಜಲು ಹಾಗೂ ಸಹ ಸವಾರ ನಾರಾಯಣ ನಾಯ್ಕ್ ಗಂಭೀರ ಗಾಯಗೊಂಡಿದ್ದಾರೆ. ಗಾಯಾಲುಗಳನ್ನು ಕೂಡಲೇ ಪುತ್ತೂರು ಆದರ್ಶ ಆಸ್ಪತ್ರೆಗೆ ಸಾಗಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.