dtvkannada

ಪುತ್ತೂರು: ಚುಟುಕು, ಸಾಹಿತ್ಯದ ಮೂಲಕ ತನ್ನದೇ ಆದ ಅಭಿಮಾನಿ ಮತ್ತು ಸ್ನೇಹಿತರ ಬಳಗವನ್ನು ಹೊಂದಿರುವ ಯುವ ಕವಿ ದಿನನಿತ್ಯ ಚುಟುಕು ಬರಹಗಳಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುತ್ತಿರುವ ಕವಿ ಸಫ್ವಾನ್ ಸವಣೂರು (ಸವಣೂರಿಗ) ರವರು ಇಂದು ಹಲವಾರು ಸ್ನೇಹಿತರ ಮತ್ತು ಕುಟುಂಬಸ್ಥರ ಅಭಿಮಾನಿಗಳ ಸಾನಿಧ್ಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.

ಸವಣೂರು ಅರೆಲ್ತಾಡಿ ನಿವಾಸಿ ಹಮೀದ್ ರವರ ಪುತ್ರ ಮೊಹಮ್ಮದ್ ಸಫ್ವಾನ್ ಇವರು ಬೆಳ್ಳಾರೆ ಮಣಿಮಜಲು ನಿವಾಸಿ ಇಸ್ಮಾಯಿಲ್ ಎಂ. ರವರ ಸುಪುತ್ರಿ ಮಹಿಳಾ ವಿದ್ವಾಂಸೆ ಶಾಕಿರ ಅಲ್-ಮಾಹಿರಾಲ ಜೊತೆ ಇಂದು ನ.11 ರಂದು ಅರೆಲ್ತಾಡಿ ಖದೀಜಾ ಮಂಝಿಲ್ ನಲ್ಲಿ ವಿವಾಹ ನಡೆಯಿತು.

ಇದೇ ವೇಳೆ ಅಪಾರ ಸ್ನೇಹಿತರು, ಅಭಿಮಾನಿಗಳು, ಸೋಷಿಯಲ್ ಮೀಡಿಯಾಗಳಲ್ಲಿ ತನ್ನ ನೆಚ್ಚಿನ ಸ್ನೇಹಿತನ ಫೋಟೋ ಹಾಕಿ ಶುಭ ಹಾರೈಸಿದರು.

By dtv

Leave a Reply

Your email address will not be published. Required fields are marked *

error: Content is protected !!