dtvkannada

ಎಸ್ಸೆಸ್ಸೆಫ್ ಎಸ್‌ವೈ‌ಎಸ್
ಆಧ್ಯಾತ್ಮಿಕ ಮಜ್ಲಿಸ್ ಮೂಲಕ ಅಹ್ಲ್ ಸುನ್ನತ್ ಜೀವಂತಗೊಳಿಸುತ್ತಿದೆ : ಎಸ್ ಎಸ್ ಅಬ್ದುಲ್ ಬಶೀರ್ ಝುಹ್ರಿ



ಮಾಣಿ : ಅಹ್ಲ್ ಸುನ್ನತ್ ವಲ್ ಜಮಾ‌ಅತ್‌ನ ಆಶಯ ಆದರ್ಶಗಳನ್ನು ಉಳಿಸಿ ಬೆಳೆಸುವುದರಲ್ಲಿ ಎಸ್ಸೆಸ್ಸೆಫ್ ಮತ್ತು ಎಸ್‌ವೈ‌ಎಸ್‌ನ ಪಾತ್ರ ಬಹಳ ದೊಡ್ಡದು ಆಧ್ಯಾತ್ಮಿಕ ಕಾರ್ಯಕ್ರಮಗಳ ಮೂಲಕ ಅದು ಆ ಪರಂಪರೆಯನ್ನು ಗಟ್ಟಿಗೊಳಿಸುತ್ತಿದೆ ಎಂದು ಎಸ್ ಎಸ್ ಅಬ್ದುಲ್ ಬಶೀರ್ ಝುಹ್ರಿ ಸಜೀಪ ಹೇಳಿದರು,ಅವರು ಎಸ್ಸೆಸ್ಸೆಫ್ ಮತ್ತು ಎಸ್‌ವೈ‌ಎಸ್ ಸೂರಿಕುಮೇರು ವತಿಯಿಂದ ನಡೆದ ಮುಹ್ಯಿದ್ದೀನ್ ಮಾಲೆ ಆಲಾಪನೆ ಕಾರ್ಯಕ್ರಮಕ್ಕೆ ನೇತೃತ್ವ ನೀಡಿ ಮಾತನಾಡಿದರು.ಅಶ್ರಫ್ ಸಖಾಫಿ ಸೂರಿಕುಮೇರು ಪ್ರಾಸ್ತಾವಿಕವಾಗಿ ಮಾತನಾಡಿ ದುಆ ನೆರವೇರಿಸಿದರು

ಕಾರ್ಯಕ್ರಮದಲ್ಲಿ ಎಸ್‌ವೈ‌ಎಸ್ ಜಿಲ್ಲಾ ಕೌನ್ಸಿಲರ್ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ, ಬ್ರಾಂಚ್ ಇಸಾಬಾ ಸೆಕ್ರೆಟರಿ ಹನೀಫ್ ಸಂಕ, ಕೋಶಾಧಿಕಾರಿ ಇಬ್ರಾಹಿಂ ಮಾಣಿ,ಹಂಝ ಸೂರಿಕುಮೇರು,ಹಮೀದ್ ಮಾಣಿ,ಫತ್ತಾಹ್ ಸೂರಿಕುಮೇರು,ಅಬ್ದುಲ್ ಖಾದರ್ ಬರಿಮಾರು, ಮುಂತಾದವರು ಉಪಸ್ಥಿತರಿದ್ದರು,ಇದೇ ವೇಳೆ ಕರ್ನಾಟಕ ಮುಸ್ಲಿಂ ಜಮಾ‌ಅತ್‌ನ ಬಂಟ್ವಾಳ ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯರಾದ ಎಸ್ ಆರ್ ಸುಲೈಮಾನ್ ಸೂರಿಕುಮೇರು ರವರ ನೇತೃತ್ವದಲ್ಲಿ ಕರ್ನಾಟಕ ಮುಸ್ಲಿಂ ಜಮಾ‌ಅತ್‌ ಸದಸ್ಯತ್ವ ಅಭಿಯಾನ ನಡೆಯಿತು,ಅಧ್ಯಕ್ಷ ಅಬ್ದುಲ್ ಕರೀಂ ಸೂರಿಕುಮೇರು ಸ್ವಾಗತಿಸಿದರು,ಕಾರ್ಯದರ್ಶಿ ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.

By dtv

Leave a Reply

Your email address will not be published. Required fields are marked *

error: Content is protected !!