dtvkannada

ಪುತ್ತೂರು: ವಾರದ ಹಿಂದೆ ನಡೆದ ಮೈಸೂರಿನ ಫೋಟೋಗ್ರಾಫರ್ ಕೊಲೆ ಪ್ರಕರಣಕ್ಕೆ ಸಂಭಂಧಿಸಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪುತ್ತೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.



ಮೈಸೂರು ಜಿಲ್ಲೆಯ ಸುಬ್ರಹ್ಮಣ್ಯ ನಗರದ ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದ ಜಗದೀಶ್ ರೈ ಎಂಬವರು ತಮ್ಮ ಕೃಷಿ ಜಮೀನು ನೋಡಲೆಂದು ಪಡವನ್ನೂರು ಗ್ರಾಮದ ಪಟ್ಟಡ್ಕ ಎಂಬಲ್ಲಿಗೆ 18-11-2021 ರಂದು ಬಂದಿದ್ದರು. ನಂತರ ಅವರು ಕಾಣೆಯಾಗಿರುವುದಾಗಿ ಅವರ ಸಹೋದರ ದೂರು ನೀಡಿದ್ದರು. ಕಾಣೆಯಾಗಿದ್ದ ಜಗದೀಶ್ ರವರು ಕೊಲೆಯಾಗಿ ಪತ್ತೆಯಾಗಿದ್ದರು. ಇದೀಗ ಈ ಕೊಲೆ ಮಾಡಿದ ಆರೋಪಿಗಳನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬಾಲಕೃಷ್ಣ ಸುಬ್ಬಯ್ಯ(59), ಪ್ರಶಾಂತ್(28), ಜೀವನ್ ಪ್ರಸಾದ್(39), ಜಯಲಕ್ಷ್ಮಿ (58), ಜಯರಾಜ್ ಶೆಟ್ಟಿ(47) ಎಂದು ಗುರುತಿಸಲಾಗಿದೆ.

ಏನಿದು ಪ್ರಕರಣ;

ಮೈಸೂರು ಜಿಲ್ಲೆಯ ಸುಬ್ರಹ್ಮಣ್ಯ ನಗರದ ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದ ಜಗದೀಶ ರೈ ರವರು ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಕುಂಜೂರುಪಂಜ ಎಂಬಲ್ಲಿ ಮತ್ತು ಪಡುವನ್ನೂರು ಗ್ರಾಮದ ಪಟ್ಲಡ್ಕ ಎಂಬಲ್ಲಿರುವ ತಮ್ಮ ಕೃಷಿ ಜಮೀನನ್ನು ನೋಡಲೆಂದು ದಿನಾಂಕ : 18.11.2021 ರಂದು ಮೈಸೂರಿನಿಂದ ಬಂದು ವಾಪಾಸ್ಸು ಮೈಸೂರಿಗೆ ಹೋಗದ ಕಾಣೆಯಾಗಿರುವುದಾಗಿ ಅವರ ಅಣ್ಣ ಶಶಿಧರ ಕಾವೂರು ರವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ 101/2021 ಕಲಂ ಮನುಷ್ಯ ಕಾಣೆ ಪ್ರಕರಣ ದಾಖಲಾಗಿತ್ತು.

ನಂತರ ಸದ್ರಿ ಕಾಣೆಯಾದ ವ್ಯಕ್ತಿಯು ಕೊಲೆಯಾಗಿರಬಹುದೆಂದು ಮನೆಯವರ ಸಂಶಯದ ಆದಾರದಲ್ಲಿ ಪತ್ತೆಯ ಬಗ್ಗೆ ವಿಶೇಷ ತಂಡವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದ ಕ ಜಿಲ್ಲೆ ರವರ ನಿರ್ದೇಶನದಂತ ಪತ್ತೆಗೆ ಪೊಲೀಸ್ ಉಪಾಧೀಕ್ಷಕರಾದ ಡಾ | ಗಾನ , ಪಿ . ಕುಮಾರ್ ನೇತೃತ್ವದಲ್ಲಿ ಪುತ್ತೂರು ಗ್ರಾಮಾಂತರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿಕ ಮತ್ತು ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಉದಯ ರವಿ ಎಂ ಪೈ ರವರುಗಳು ವಿಶೇಷ ತಂಡ ರಚಿಸಿದ್ದರು.

ಅದರಂತೆ ಸದ್ರಿ ವಿಶೇಷ ತಂಡದ ಅಧಿಕಾರಿ ಮತ್ತು ಸಿಬ್ಬಂಧಿಗಳು ಕ್ಲಿಷ್ಟಕರವಾದ ಈ ಪ್ರಕರಣ ಪತ್ತೆ ಹಚ್ಚುವಲ್ಲಿ ಹಲವು ಅಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂದಿಸಿದ್ದು , ಈ ಪ್ರಕರಣದಲ್ಲಿ ಕೊಲೆಯಾದ ಜಗದೀಶ ರವರು ಅವರ ಜಮೀನು ನೋಡಲು ಬರುವ ಸಮಯದಲ್ಲಿ ಕೊಲೆ ಮಾಡುವ ಬಗ್ಗೆ ಸುಮಾರು 10 ದಿನಗಳ ಹಿಂದೆ ತಿಂಗಳಾಡಿಯ ಉಮೇಶ್ ರ ಕೊಲೆ ಪ್ರಕರಣದ ಆರೋಪಿ ಜಯರಾಜ್ ಶೆಟ್ಟಿ ಅನಿಲ ಎಂಬಾತನು ಜೊತೆ ಸೇರಿ ಬಾಲಕೃಷ್ಣ.ರ , ಸುಬ್ಬಯ್ಯ ರೈ , ಪ್ರಶಾಂತ , ಜೀವನ್ ಪ್ರಸಾದ್ ಮತ್ತು ಶ್ರೀಮತಿ ಜಯಲಕ್ಷ್ಮಿ ಎಂಬವರು ಸೇರಿಕೊಂಡು ಸಂಚು ರೂಪಿಸಿಕೊಂಡು ಕೊಲೆ ಮಾಡುವುದಾಗಿ ತಿರ್ಮಾನಿಸಿ ಜಗದೀಶ ರವರು ತನ್ನ ಜಮೀನನ್ನು ನೋಡಲು ಮತ್ತು ಪಡುವನ್ನುರು ಗ್ರಾಮದ ಪಟ್ಲಡ್ಕ ದ ಜಮೀನಿನ ನೊಂದಣಿಯನ್ನು ಮಾಡುವ ವಿಚಾರದಲ್ಲಿ ಮಾತನಾಡುವ ಬಗ್ಗೆ ದಿನಾಂಕ 18-11-2021 ರಂದು ಬರುವುದಾಗಿ ತಿಳಿಸಿದ್ದರು.

ಆ ದಿನವೇ ಜಗದೀಶರನ್ನು ಕೊಲೆ ಮಾಡಿ ಯಾರಿಗೂ ತಿಳಿಯದ ರೀತಿಯಲ್ಲಿ ಮೃತ ದೇಹವನ್ನು ಮಣ್ಣಿನಲ್ಲಿ ಹೂತು ಹಾಕಿ ನಾಶ ಮಾಡುವ ಬಗ್ಗೆ ಆರೋಪಿಗಳೆಲ್ಲರೂ ತೀರ್ಮಾನಿಸಿಕೊಂಡು ಅದರಂತ ದಿನಾಂಕ 18-11-2021 ರಂದು ಬೆಳಗ್ಗಿನ ಜಾವ ಮೈಸೂರಿನಿಂದ ಜಗದೀಶನು ಬಸ್ಸಿನಲ್ಲಿ ಹೊರಟು 11.00 ಗಂಟೆ ಸುಮಾರಿಗೆ ಸಂಪ್ಯಕ್ಕೆ ಬಂದಿಳಿದವರನ್ನು ಬಾಲಕೃಷ್ಣ ರೈ ಥಿ ಸುಬ್ಬಯ್ಯ ರೈ ರವರು ಆಟೋ ರಿಕ್ಷಾ ಒಂದರಲ್ಲಿ ಅರ್ಯಾಪು ಗ್ರಾಮದ ಮೇಗಿನ ಪಂಜ ಎಂಬಲ್ಲಿಯ ಜಮೀನಿಗೆ ಕರೆದುಕೊಂಡು ಹೋಗಿ ಅಲ್ಲಿಂದ ಪುತ್ತೂರಿಗೆ ಬಂದು ಪುತ್ತೂರಿನಿಂದ ಜೊತೆಯಾಗಿ ಬಸ್ಸಿನಲ್ಲಿ ಕಾವು ಎಂಬಲ್ಲಿ ಬಂದಿಳಿದಿದ್ದರು.

ಅಲ್ಲಿಂದ ಸ್ವಲ್ಪ ದೂರಕ್ಕೆ ಈಶ್ವರಮಂಗಳ ರಸ್ತೆ ಕಡೆಗೆ ನಡೆದುಕೊಂಡು ಹೋದಾಗ ಈ ಮೊದಲು ತೀರ್ಮಾನಿಸಿದಂತೆ ಆರೋಪಿ ಪ್ರಶಾಂತ ಮತ್ತು ಜೀವನ್ ಪ್ರಸಾದ್ ಎಂಬವರು ಕಾರಿನಲ್ಲಿ ಬಂದಿದ್ದವರು ಜಗದೀಶ ರವರನ್ನು ಕಾರಿನಲ್ಲಿ ಕುಳ್ಳಿಸಿ ಅಪಹರಣ ಮಾಡಿಕೊಂಡು ಕಾರನ್ನು ಪ್ರಶಾಂತನು ಚಲಾಯಿಸುತ್ತಾ ಮುಂಬದಿಯ ಕಾರಿನ ಸೀಟಿನಲ್ಲಿ ಬಾಲಕೃಷ್ಣ ರ ಥಿ ಸುಬ್ಬಯ್ಯ ರ ರವರು ಕುಳಿತುಕೊಂಡಿದ್ದು ಹಿಂಬದಿಯ ಸೀಟಿನಲ್ಲಿ ಜಗದೀಶ ನನ್ನು ಕುಳ್ಳಿಸಿ ಆತನೊಂದಿಗೆ ಜೀವನ್ ಪ್ರಸಾದ್ , ಕುಳಿತುಕೊಂಡು ನೂಜಿ ಬೈಲು ಪರ್ನಾಜ ರಸ್ತೆಯಲ್ಲಿ ಸುಮಾರು 4 ಕಿ ಮೀ ದೂರ ಹೋಗಿ ಅಲ್ಲಿಂದ ಕಾರನ್ನು ತಿರುಗಿಸಿಕೊಂಡು ವಾಪಸ್ಸು ಬರುತ್ತಾ ಜೀವನ್ ಪ್ರಸಾದನು ಜಗದೀಶ ರವರನ್ನು ಹಿಡಿದುಕೊಂಡು ತಲೆಯನ್ನು ಬಗ್ಗಿಸಿದಾಗ ಎದುರು ಸೀಟಿನಲ್ಲಿ ಕುಳಿತಿದ್ದ ಬಾಲಕೃಷ್ಣ ರೈ ಥಿ ಸುಬ್ಬಯ್ಯ ರ ರವರು ಈಗಾಗಲೇ ಕಾರಿನಲ್ಲಿ ತಂದಿದ್ದ ಸುತ್ತಿಗೆಯಲ್ಲಿ ಜಗದೀಶ ರವರ ತಲೆಗೆ ಬಲವಾಗಿ ಹೊಡೆದ ಸಮಯ ಜಗದೀಶ ರವರು ಪ್ರಜ್ಞೆ ತಪ್ಪಿದ್ದು ಆ ಸಮಯ ಹಿಂದಿನಿಂದ ಯಾವುದೋ ವಾಹನ ಬರುವುತ್ತಿರುವುದನ್ನು ಗಮನಿಸಿದದ್ದರು.

ಆರೋಪಿಗಳು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಪಡುವನ್ನೂರು ಗ್ರಾಮ ಪಟ್ಲಡ್ಕದ ಮೂನಡ್ಕ ತೋಟದಲ್ಲಿನ ಕಟ್ಟಡದ ಬಳಿಗೆ ಹೋಗಿ ಆ ಸಮಯ ಜಗದೀಶ ರವರು ಉಸಿರಾಡಿಕೊಂಡು ಜೀವಂತವಾಗಿರುವುದನ್ನು ಗಮನಿಸಿದ ಆರೋಪಿಗಳು ಮತ್ತೆ ತಮ್ಮಲ್ಲಿದ್ದ ಚಾಕುವಿನಿಂದ ಕುತ್ತಿಗೆಗೆ ಮತ್ತು ಬೆನ್ನಿಗೆ ತಿವಿದು ಕೊಲೆ ಮಾಡಿ ನಂತರ ಮೃತ ದೇಹವನ್ನು ಪಡುವನ್ನೂರು ಗ್ರಾಮದ ಮುಗುಳಿ ಎಂಬಲ್ಲಿಯ ಅರಣ್ಯ ಇಲಾಖೆಗೆ ಸಂಭಂದಿಸಿದ ಅಕೇಶಿಯಾ ನಡು ತೋಪಿನ ಗುಡ್ಡದಲ್ಲಿ ಹೊಂಡ ತೆಗೆದು ಜಗದೀಶ ರವರ ಮೃತ ದೇಹವನ್ನು ಹೂತು ಹಾಕಿ ಸಾಕ್ಷಿ ನಾಶ ಮಾಡಲು ಪ್ರಯತ್ನ ಪಟ್ಟು ಘನ ಘೋರ ಕೃತ್ಯ ಎಸಗಿರುದಾಗಿದೆ.

ಕೊಲೆ ಮಾಡಿದ ನಂತರ ಸಾಕ್ಷಿ ನಾಶ ಮಾಡಲು ಜಗದೀಶ ಆತನು ಬಳಸುತ್ತಿದ್ದ ಮೊಬೈಲ್ ನ್ನು ರಾತ್ರೋ ರಾತ್ರಿ ಮೈಸೂರಿಗೆ ಹೋಗಿ ಮೈಸೂರಿನ ಹೂಟಗಲ್ಲಿಯಲ್ಲಿ ಬಿಸಾಡಿದ್ದು ನಂತರ ಹತ್ಯೆಗೆ ಬಳಸಿದ ಸುತ್ತಿಗೆ ಮತ್ತು ಚಾಕುವನ್ನು ಕುಶಾಲನಗರ ಶುಂಠಿ ಕೊಪ್ಪ ರಸ್ತೆಯ ಬದಿಯಲ್ಲಿ ಬಿಸಾಡಿರುತ್ತಾರೆ, ಈ ಕೊಲೆಗೆ ಜಗದೀಶ ರವರು ಮತ್ತು ಬಾಲಕೃಷ್ಣ ರೈ, ಸುಬ್ಬಯ್ಯ ರೈ ರವರು ಹತ್ತಿರದ ಸಂಭಂದಿಗಳಾಗಿದ್ದು ಜಗದೀಶ ರವರ ಪುತ್ತೂರಿನ ಜಮೀನು ಎಲ್ಲಾ ವ್ಯಹಾರಗಳನ್ನು ಆರೋಪಿ ಬಾಲಕೃಷ್ಣ ರೈ @ ಸುಬ್ಬಯ್ಯ ರ ರವರು ನೋಡಿಕೊಳ್ಳುತ್ತಿದ್ದರು.

ಜಗದೀಶ ರವರೊಂದಿಗೆ ತುಂಬಾ ಆತ್ಮೀಯಾ ರಾಗಿ ಇದ್ದುಕೊಂಡು ಅವರಿಗೆ ತಿಳಿಯದಂತೆ ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಪಟ್ಲಡ್ಕ ಎಂಬಲ್ಲಿಯ ಜಮೀನನ್ನು ಜಗದೀಶ ರವರಿಗೆ ತಿಳಿಯದಂತೆ ತನ್ನ ಹೆಸರಿನಲ್ಲಿ ಮಾಡಿಕೊಂಡು ಬೆರೋಬ್ಬರಿಗೆ ಮಾರಾಟ ಮಾಡಿದ್ದು , ಮುಂದಕ್ಕೆ ಜಾಗವನ್ನು ಖರೀದಿಸಿದವರು ಕೃಷಿ ಚಟುವಟಿಕೆ ಮಾಡಿಕೊಂಡಿದ್ದು ಈ ವಿಚಾರ ಜಗದೀಶನಿಗೆ ತಿಳಿದರೆ ಮುಂದಕ್ಕೆ ಸಮಸ್ಯೆಯಾಗಬಹುದೆಂದು ತಿಳಿದು , ಜಗದೀಶ್ ಯವರು ಜೀವಂತ ಇದ್ದರೆ ತೊಂದರೆಯಾಗಬಹುದೆಂದು ಭಾವಿಸಿ ಜಗದೀಶ ರನ್ನು ಕೊಲೆ ಮಾಡಬೇಕೆಂದು ತೀರ್ಮಾನಿಸಿದ್ದರು.

ಈ ಹಿಂದೆ ತಿಂಗಳಾಡಿಯ ಉಮೇಶ್ ರ ಕೊಲೆ ಪ್ರಕರಣದ ಆರೋಪಿ ರೌಡಿ ಶೀಟರ್ ಜಯರಾಜ್ ಶೆಟ್ಟಿ ಅನಿಲೆ ಎಂಬಾತನ ಮಾರ್ಗದರ್ಶನದಲ್ಲಿ ಸಂಚು ರೂಪಿಸಿಕೊಂಡು ಬಾಲಕೃಷ್ಣರ ಸುಬ್ಬಯ್ಯ ರವರು ಅವರ ಮಗ ಪ್ರಶಾಂತ್ ಪತ್ನಿ ಶ್ರೀಮತಿ ಜಯಲಕ್ಷ್ಮೀ ಮತ್ತು ನರ ಮನ ನಿವಾಸಿ ಜೀವನ್ ಪ್ರಸಾದ್ ರವರೊಂದಿಗೆ ಸೇರಿಕೊಂಡು ಕೊಲೆ ಮಾಡಿರುವುದಾಗಿದೆ .

ಈ ಕೃತ್ಯಕ್ಕೆ ಆರೋಪಿಗಳು ಬಳಸಿದ ಮಾರುತಿ ಸುಜುಕಿ ಕಂಪೆನಿಯ ಸಲಿರಿಯೋ ಕಾರು ಮತ್ತು ಅನ್ನೋ ಕಾರನ್ನು ಹಾಗೂ ಸುತ್ತಿಗೆ , ಚಾಕುವನ್ನು ಮತ್ತು ಮೃತರ ಕುತ್ತಿಗೆಯಲ್ಲಿ ಇದ್ದ ಚಿನ್ನದ ಸರ ಆರೋಪಿ ಪ್ರಶಾಂತನ ಬಳಿಯಿದ್ದದನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ . ಸ್ವಾಧೀನ ಪಡಿಸಿ ಕೊಂಡ ಸೊತ್ತುಗಳ ಅಂದಾಜು ಮೌಲ್ಯ ಸುಮಾರು ರೂ . 6,00,000 / ಅಗಬಹುದು .

ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಪ್ರಕರಣವನ್ನು ಭೇಧಿಸುವಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಭಗವಾನ್ ಸೋನಾವನ , ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಡಾ || ಶಿವ ಕುಮಾರ್ , ರವರುಗಳ ಮಾರ್ಗದರ್ಶನದಂತೆ ಪೊಲೀಸ್ ಉಪಾಧೀಕ್ಷಕರಾದ ಡಾ || ಗಾನ , ಪಿ . ಕುಮಾರ್‌ ನೇತೃತ್ವದಲ್ಲಿ ಪುತ್ತೂರು ಗ್ರಾಮಾಂತರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿಕ ಮತ್ತು ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಉದಯ ರವಿ ಎಂ ವ್ಯ ಮತ್ತು ಅಪರಾಧ ವಿಭಾಗದ ಪೊಲೀಸ್ ಉಪನಿರೀಕ್ಷಕರಾದ ಅಮೀನ್ ಸಾಬ್ ಅತ್ತಾರ್ , ಪ್ರೋ ಪಿಎಸ್‌ಐ ಶ್ರೀಕಾಂತ ರಾಥೋಡ್ ರವರು ಮತ್ತು ಸಿಬ್ಬಂದಿಗಳಾದ ಎ ಎಸ್ ಐ ಜಗನ್ನಾಥ್ , ಶಿವರಾಮ ಹೆಚ್ , ಧರ್ಣಪ್ಪ ಗೌಡ , ಸಲೀಂ , ದೇವರಾಜ್ , ಅದ್ರಾಮ್ , ಸ್ಕರಿಯ , ಪ್ರಶಾಂತ್ ರ , ಪ್ರವೀಣ್ ರ ಪಾಲ್ತಾಡಿ , ಪ್ರಶಾಂತ , ಕೃಷ್ಣಪ್ಪ ಗೌಡ , ಲಕ್ಷ್ಮೀಶ ಗೌಡ , ಜಗದೀಶ ಅತ್ತಾಜೆ , ಹರ್ಷೀತ್ , ಲೋಕೇಶ , ಗಿರೀಶ ರೈ , ಮುನಿಯ ನಾಯ್ಕ , ಗುಡದಪ್ಪ ಹೋಟರ್ , ಮಪಿಸಿ ಧನ್ಯಶ್ರೀ , ಗಾಯತ್ರಿ , ಜಿಲ್ಲಾ ಗಣಕ ಯಂತ್ರದ ಸಂಪತ್ , ದಿವಾಕರ್ , ಹಾಗೂ ಚಾಲಕರಾದ ಹರೀಶ ನಾಯ್ಕ , ನವಾಝ್ ಬುಡ್ಡಿ , ಮತ್ತು ವಿನೋದ್ ರವರುಗಳ ನೇತೃತ್ವದ ತಂಡವು ಈ ಕ್ಲಿಷ್ಟಕರವಾದ ಪ್ರಕರಣವನ್ನು ಕೇವಲ ಒಂದೇ ವಾರದಲ್ಲಿ ಭೇದಿಸುವಲ್ಲಿ ಸಫಲರಗಿರುತ್ತಾರೆ.ಈ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಸೂಕ್ತ ಬಹುಮಾನವನ್ನು ಘೋಷಿಸಿರುತ್ತಾರೆ .

By dtv

Leave a Reply

Your email address will not be published. Required fields are marked *

error: Content is protected !!