ಉಪ್ಪಿನಂಗಡಿ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದು, ಒಂದು ತಂಡದಿಂದ ಮತ್ತೊಂದು ತಂಡದವರಿಗೆ ಹಲ್ಲೆ ನಡೆದಿರುವ ಬಗ್ಗೆ ಇದೀಗ ವರದಿಯಾಗಿದೆ.
![](http://dtvkannada.in/wp-content/uploads/2021/12/IMG-20211206-WA0078.jpg)
ಉಪ್ಪಿನಂಗಡಿಯಲ್ಲಿ ಇತ್ತಂಡಗಳ ನಡುವೆ ತಲ್ವಾರ್ ದಾಳಿ ಮುಂದುವರೆದಿದ್ದು ಇದೀಗ ಉಪ್ಪಿನಂಗಡಿ ಸಮೀಪದ ಹಳಗೇಟು ಎಂಬಲ್ಲಿ ಮೂವರು ಹಿಂದೂ ಯುವಕರ ಮೇಲೆ ತಲವಾರು ದಾಳಿ ನಡೆದಿದೆ ಎಂದು ವರದಿಯಾಗಿದೆ.
ನಿನ್ನೆಯಷ್ಟೇ ಇಳಂತಿಲ ಎಂಬಲ್ಲಿ ನಾಲ್ವರು ಮುಸ್ಲಿಂ ಯುವಕರಿಗೆ ಅನ್ಯಕೋಮಿನ ತಂಡದಿಂದ ತ್ರಿಶೂಲ ದಾಳಿ ನಡೆದಿದ್ದು, ಈ ದಾಳಿಗೆ ಪ್ರತಿಯಾಗಿ ದಾಳಿ ನಡೆದಿದೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.
ಗಾಯಾಲುಗಳನ್ನು ಪುತ್ತೂರು ಮಹಾವೀರ ಆಸ್ಪತ್ರೆಗೆ ಸಾಗಿಸಲಾಗಿದ್ದು, ಹೆಚ್ಚಿನ ವಿವರ ತಿಳಿದು ಬಂದಿಲ್ಲ.