ಹಾಸನ: ಬೈಕ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ದಂಪತಿಗಳಿಬ್ಬರು ಗಂಭೀರ ಗಾಯಗೊಂಡು ಪುಟ್ಟ ಅವಳಿ ಮಕ್ಕಳಿಬ್ಬರು ಸ್ಥಳದಲ್ಲಿಯೇ ದಾರುಣ ಮೃತಪಟ್ಟ ಘಟನೆ ಹಾಸನ ಸಮೀಪ ನಡೆದಿದೆ.
![](http://dtvkannada.in/wp-content/uploads/2021/12/IMG-20211220-WA0023.jpg)
ಮೃತ ಅವಳಿ ಮಕ್ಕಳನ್ನು ಪ್ರಣತಿ(3ವರ್ಷ) ಪ್ರಣವ್(3ವರ್ಷ) ಎಂದು ತಿಳಿದು ಬಂದಿದೆ. ಶಿವಾನಂದ್ ಹಾಗೂ ಪತ್ನಿ ಜ್ಯೊತಿ ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಸಾವು- ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
![](http://dtvkannada.in/wp-content/uploads/2021/12/IMG-20211220-WA0022.jpg)
ಲಾರಿ ಚಾಲಕನ ಅಜಾಗರೂಕತೆಯಿಂದ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಹಿಂದಿನಿಂದ ವೇಗವಾಗಿ ಬಂದ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಮಕ್ಕಳಿಬ್ಬರೂ ಲಾರಿಯ ಚಕ್ರಕ್ಕೆ ಸಿಲುಕಿ ಸುಮಾರು ಒಂದು ಕಿಲೋ ಮೀಟರ್ ದೂರದವವರೆಗೆ ಲಾರಿ ಎಳೆದುಕೊಂಡು ಹೋಗಿದೆ. ಪರಿಣಾಮ ಮಕ್ಕಳ ದೇಹ ಛಿದ್ರವಾಗಿದ್ದು ಗುರುತೂ ಕೂಡ ಸಿಗದಂತಾಗಿದೆ.
ಸ್ಥಳಕ್ಕೆ ಹಾಸನ ಸಂಚಾರ ಪೊಲೀಸರು ಆಗಮಿಸಿ ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.