dtvkannada

ಉಪ್ಪಿನಂಗಡಿ: ಇಲ್ಲಿನ ವಳಾಲು ಮುಹಿಯುದ್ದೀನ್ ಜುಮ್ಮಾ ಮಸೀದಿಗೆ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರವರು ಇಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರನ್ನು ಮಸೀದಿಯ ವತಿಯಿಂದ ನೂರುಲ್ ಹುದಾ ಮದರಸದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಮಸೀದಿಯ ಖತೀಬರಾದ ಮುಹಮ್ಮದ್ ಮಿಸ್ಬಾಹಿ ಸನ್ಮಾನ ನೆರವೇರಿಸಿದರು. ಮದರಸದ ಸದರ್ ಮುಅಲ್ಲಿಂ ಯೂಸುಫ್ ಮದನಿ, ಶಾಫಿ ಸಖಾಫಿ ಪಡ್ಡೂರು ಮತ್ತು ಮದರಸದ ವಿದ್ಯಾರ್ಥಿಗಳು ಹಾಗೂ ಜಮಾಅತಿಗರು ಉಪಸ್ಥಿತರಿದ್ದರು.

By dtv

Leave a Reply

Your email address will not be published. Required fields are marked *

error: Content is protected !!