dtvkannada

'; } else { echo "Sorry! You are Blocked from seeing the Ads"; } ?>

ಮಂಗಳೂರು: ನಗರದ ಮಹಿಳಾ ಠಾಣೆಯ ಪೊಲೀಸ್‌ ಜೀಪ್‌ ಚಾಲಕನ ನಿಯಂತ್ರಣ ತಪ್ಪಿ ಬಸ್ಟ್ಯಾಂಡ್‌ಗೆ ನುಗ್ಗಿದ ಪರಿಣಾಮ ಓರ್ವ ಪೊಲೀಸ್‌ ಅಧಿಕಾರಿಗೆ ಗಾಯವಾದ ಘಟನೆ ಇಂದು ನಗರ ಹೊರವಲಯದ ಎಡಪದವು ಬಳಿ ನಡೆದಿದೆ.



ಇಂದು ಬೆಳಗ್ಗೆ ಠಾಣೆಯ ಇನ್ಸ್ಪೆಕ್ಟರ್ ರೇವತಿ ಅವರಿದ್ದ ಪೊಲೀಸ್ ಜೀಪ್ ಎಡಪದವು ವಿವೇಕಾನಂದ ಜೂನಿಯರ್ ಕಾಲೇಜು ಮುಂಭಾಗದಲ್ಲಿರುವ ಬಸ್ ಸ್ಟಾಂಡ್ ಗೆ ನಿಯಂತ್ರಣ ತಪ್ಪಿ ನುಗ್ಗಿದೆ. ಅಪಘಾತದಲ್ಲಿ ಇನ್ಸ್ಪೆಕ್ಟರ್ ರೇವತಿ ಅವರ ಕೈಗೆ ಗಾಯವಾಗಿದೆ.

ಘಟನೆ ನಡೆಯುತ್ತಿದ್ದಂತೆ ಧಾವಿಸಿ ಬಂದ ಎಡಪದವು ಪಂಚಾಯತ್ ಅಧ್ಯಕ್ಷ ಸುಕುಮಾರ್ ದೇವಾಡಿಗ ಮತ್ತು ಸ್ಥಳೀಯರು ರೇವತಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ, ಅಪಘಾತದಲ್ಲಿ ಪೊಲೀಸ್ ಜೀಪ್ ಜಖಂ ಗೊಂಡಿದ್ದು ಬಸ್ ಸ್ಟಾಂಡ್ ಪುಡಿ ಪುಡಿಯಾಗಿದೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

You missed

error: Content is protected !!