dtvkannada

ಉಪ್ಪಿನಂಗಡಿ: ಇತ್ತೀಚೆಗೆ ಬಹಳಷ್ಟು ಅಪಘಾತಗಳಿಗೆ ಸುದ್ದಿಯಾಗುತ್ತಿದ್ದು ಅದರಲ್ಲಿ ರಸ್ತೆ ಮತ್ತು ರಸ್ತೆ ಬದಿಗಳ ಗುಂಡಿಗಳು ಒಂದು ಕಾರಣ ಅನ್ನಬಹುದು.



ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಆದಿತ್ಯ ಹೋಟೆಲ್ ಸಮೀಪ ರಸ್ತೆ ಬದಿಯ ಒಂದು ತಿರುವಿನಲ್ಲಿ ಅಪಾಯಕಾರಿ ಗುಂಡಿಯೊಂದು ಬಾಯಿ ತೆರೆದಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.



ಬಾರಿ ದೊಡ್ಡ ಮಟ್ಟದ ಗುಂಡಿಯಾಗಿದ್ದು ಬಸ್ಸುಗಳು ಕೂಡ ನಿಯಂತ್ರಣ ತಪ್ಪಿದರೆ ಆ ಗುಂಡಿಗೆ ಬೀಳುವ ಸಾಧ್ಯತೆಯಿದ್ದು. ಬೈಕ್ ಮತ್ತು ಆಟೋ ಚಾಲಕರಿಗಂತು ಅಪಾಯ ಕಟ್ಟಿಟ್ಟ ಬುತ್ತಿ.
ತಕ್ಷಣವೇ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಈ ಅಪಾಯಕಾರಿ ಗುಂಡಿಯನ್ನು ಸಂಭಂದಪಟ್ಟ ಅಧಿಕಾರಿಗಳು ಆಡಳಿತ ವರ್ಗ ಆದಷ್ಟು ಬೇಗ ತೆರವುಗೊಳಿಸಿ ಮನುಷ್ಯ ಜೀವಗಳನ್ನು ಉಳಿಸಬೇಕೆಂದು ಸಾರ್ವಜನಿಕರ ಆಗ್ರಹ.

By dtv

Leave a Reply

Your email address will not be published. Required fields are marked *

error: Content is protected !!