ಉಪ್ಪಿನಂಗಡಿ: ಇತ್ತೀಚೆಗೆ ಬಹಳಷ್ಟು ಅಪಘಾತಗಳಿಗೆ ಸುದ್ದಿಯಾಗುತ್ತಿದ್ದು ಅದರಲ್ಲಿ ರಸ್ತೆ ಮತ್ತು ರಸ್ತೆ ಬದಿಗಳ ಗುಂಡಿಗಳು ಒಂದು ಕಾರಣ ಅನ್ನಬಹುದು.
![](http://dtvkannada.in/wp-content/uploads/2022/01/IMG-20220105-WA0035-1024x574.jpg)
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಆದಿತ್ಯ ಹೋಟೆಲ್ ಸಮೀಪ ರಸ್ತೆ ಬದಿಯ ಒಂದು ತಿರುವಿನಲ್ಲಿ ಅಪಾಯಕಾರಿ ಗುಂಡಿಯೊಂದು ಬಾಯಿ ತೆರೆದಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.
![](http://dtvkannada.in/wp-content/uploads/2022/01/IMG-20220105-WA0036-1024x594.jpg)
![](http://dtvkannada.in/wp-content/uploads/2022/01/IMG-20220105-WA0034.jpg)
ಬಾರಿ ದೊಡ್ಡ ಮಟ್ಟದ ಗುಂಡಿಯಾಗಿದ್ದು ಬಸ್ಸುಗಳು ಕೂಡ ನಿಯಂತ್ರಣ ತಪ್ಪಿದರೆ ಆ ಗುಂಡಿಗೆ ಬೀಳುವ ಸಾಧ್ಯತೆಯಿದ್ದು. ಬೈಕ್ ಮತ್ತು ಆಟೋ ಚಾಲಕರಿಗಂತು ಅಪಾಯ ಕಟ್ಟಿಟ್ಟ ಬುತ್ತಿ.
ತಕ್ಷಣವೇ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಈ ಅಪಾಯಕಾರಿ ಗುಂಡಿಯನ್ನು ಸಂಭಂದಪಟ್ಟ ಅಧಿಕಾರಿಗಳು ಆಡಳಿತ ವರ್ಗ ಆದಷ್ಟು ಬೇಗ ತೆರವುಗೊಳಿಸಿ ಮನುಷ್ಯ ಜೀವಗಳನ್ನು ಉಳಿಸಬೇಕೆಂದು ಸಾರ್ವಜನಿಕರ ಆಗ್ರಹ.