ಉಪ್ಪಿನಂಗಡಿ:- SYS ತೆಕ್ಕಾರು ಬ್ರಾಂಚ್ ವತಿಯಿಂದ ಜಲಾಲಿಯ್ಯ ವಾರ್ಷಿಕದ ಅಂಗವಾಗಿ ಇಂದು(11 ಜನವರಿ ಮಂಗಳವಾರ) ಮತ ಪ್ರಭಾಷಣ ಕಾರ್ಯಕ್ರಮ ನಡೆಯಲಿದ್ದು ಖ್ಯಾತ ವಾಗ್ಮಿ ಹಾಫಿಲ್ ಮಸ್ಹೂದ್ ಸಖಾಫಿ ಗೂಡಲ್ಲೂರ್ ತಮಿಳುನಾಡು ಮುಖ್ಯ ಪ್ರಭಾಷಣಗೈಯಲಿದ್ದಾರೆ.
![](http://dtvkannada.in/wp-content/uploads/2022/01/IMG-20220111-WA0030-1024x1024.jpg)
ಬದ್ರಿಯಾ ಜುಮಾ ಮಸ್ಜಿದ್ ತೆಕ್ಕಾರು ಇದರ ಅಂಗಸಂಸ್ಥೆ ಸುನ್ನೀ ಯುವಜನ ಸಂಘ ಪ್ರತಿ ಮೂರು ತಿಂಗಳಿಗೊಮ್ಮೆ ಆಚರಿಸಿಕೊಂಡು ಬರುವ ಹಲವಾರು ಪವಾಡಗಳು ತುಂಬಿರುವ ಜಲಾಲಿಯ್ಯ ಆಧ್ಯಾತ್ಮಿಕ ಮಜ್ಲೀಸ್ ನ ವಾರ್ಷಿಕ ಕಾರ್ಯಕ್ರಮದಲ್ಲಿ ಐತಿಹಾಸಿಕವಾದ ಮತ ಪ್ರಬಾಷಣವನ್ನು ಬಹು ಮಸ್ಹೂದ್ ಸಖಾಫಿ ಮಂಡಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿವಿಧ ಉಲಮಾಗಳು ಉಮರಾ ನಾಯಕರು ಬಾಗವಹಿಸಲಿದ್ದಾರೆ.
![](http://dtvkannada.in/wp-content/uploads/2022/01/IMG-20220111-WA0027-682x1024.jpg)
ಕಾರ್ಯಕ್ರಮ ಕೋವಿಡ್ ನಿಯಮಕ್ಕನುಸಾರವಾಗಿ ನಡೆಯಲಿದ್ದು ಸಂಜೆ 6:30ಕ್ಕೆ ಕಾರ್ಯಕ್ರಮ ಪ್ರಾರಂಭಗೊಂಡು ರಾತ್ರಿ 9;30ಕ್ಕೆ ಸಮಾಪ್ತಿಗೊಳ್ಳಲಿದೆ.ಪ್ರಪ್ರಥಮ ಬಾರಿಗೆ ಮಸ್ಹೂದ್ ಸಖಾಫಿ ತೆಕ್ಕಾರಿಗೆ ಆಗಮಿಸುತ್ತಿದ್ದು ಸಹಸ್ರಾರು ಮಂದಿ ಕಾರ್ಯಕ್ರಮದಲ್ಲಿ ಬಾಗವಹಿಸುವ ನಿರೀಕ್ಷೆಯಿದೆ.