ಬೆಂಗಳೂರು:- ನಮ್ಮ ನೀರು ನಮ್ಮ ಹಕ್ಕು ಎಂಬ ಘೋಷ ವಾಕ್ಯದೊಂದಿಗೆ ಕರ್ನಾಟಕ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ಮೇಕೆದಾಟು ಪಾದಯಾತ್ರೆ ಮೂರನೇ ದಿನವೂ ಮುಂದುವರೆದಿದ್ದು.
ಇಂದು ಸುಮಾರು 15 ಕಿ.ಮೀ ಗಳು ಕಾಲ್ನಡಿಗೆ ಮೂಲಕ ಕೈ ನಾಯಕರು ಪಾದಯಾತ್ರೆ ಮುಂದುವರಿಸಲಿದ್ದಾರೆ.
![](http://dtvkannada.in/wp-content/uploads/2022/01/8667433eec966e49713570a408f6c415-1024x683.jpg)
ಪಾದಯಾತ್ರೆ ಚಾಲನೆಗೊಂಡ ದಿನದಂದು ತೀವ್ರ ಜ್ವರದಿಂದ ಬಳಲುತ್ತಿದ್ದ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯರು ಡಾಕ್ಟರ್ ಗಳ ಸಲಹೆ ಮೇರೆಗೆ ಎರಡು ದಿನ ವಿಶ್ರಾಂತಿಯಲ್ಲಿದ್ದರು.
ಇಂದು ಮತ್ತೆ ಪಾದಯಾತ್ರೆಗೆ ಇಳಿದಿದ್ದು ಇಂದಿನ ಪಾದಯಾತ್ರೆಯನ್ನು ಮಾಜಿ ಸಿ.ಎಂ ಮುನ್ನಡೆಸಲಿದ್ದಾರೆ.
ಇಂದು ಕನಕಪುರದಿಂದ ರಾಮನಗರ ವರೆಗೂ ಪಾದಯಾತ್ರೆ ನಡೆಯಲಿದ್ದು ಸಾವಿರಾರು ಮಂದಿಗಳು ಕೈ ನಾಯಕರ ಜೊತೆ ಹೆಜ್ಜೆ ಹಾಕಲಿದ್ದಾರೆ.