dtvkannada

ಉಪ್ಪಿನಂಗಡಿ: ತೆಕ್ಕಾರು ವ್ಯಾಪ್ತಿಯ ಹಲವಾರು ಪೋಷಕರ ಹಲವಾರು ವರುಷಗಳ ಕೂಗಿಗೆ ಇದೀಗ ಪ್ರತಿಕ್ರಿಯೆ ದೊರಕಿದೆ.
ಸರಕಾರಿ ಪ್ರೌಢ ಶಾಲೆ ಸರಳಿಕಟ್ಟೆ ಇದನ್ನು ಉನ್ನತೀಕರಿಸಿ ಕಾಲೇಜು ಪ್ರಾರಂಭಿಸಬೇಕೆಂದು ಹಲವಾರು ವರ್ಷಗಳಿಂದ ಈ ಬಾಗದ ಜನರ ನಿರಂತರ ಬೇಡಿಕೆಯಾಗಿದ್ದು ಇದಕ್ಕೆ ಪ್ರತಿಯಾಗಿ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯ ಸರಳಿಕಟ್ಟೆ ಪ್ರೌಢ ಶಾಲೆಯನ್ನು ಉನ್ನತೀಕರಿಸಿ ಪದವಿ ಪೂರ್ವ ಕಾಲೇಜು ಪ್ರಾರಂಭಿಸಲು ಆದೇಶ ಹೊರಡಿಸಿದೆ.



ಪ್ರಸ್ತುತ ಆದೇಶವನ್ನು ಈ ಬಾಗದ ಜನ ಸ್ವಾಗತಿಸಿದ್ದು ಎಲ್ಲೆಡೆ ಸಂತೋಷ ವ್ಯಕ್ತಪಡಿಸಿದ್ದಾರೆ.
ದಶಕಗಳ ಕನಸಿಗೆ ನಾಂದಿ ಹಾಡಿದೆ, ಹೊಸ ಪರ್ವದ ಕಾಲ ಇಲ್ಲಿ ಚಿಗುರೊಡೆದಿದೆ.

ಕಾಲೇಜು ಪ್ರಾರಂಭಿಸುವಂತೆ ಈ ಹಿಂದೆ ತೆಕ್ಕಾರು ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ಅಬ್ದುಲ್ ರಝಾಕ್ ಶಿಕ್ಷಣ ಸಚಿವರಿಗೆ ಮನವಿ ನೀಡಿದ್ದರು.

By dtv

Leave a Reply

Your email address will not be published. Required fields are marked *

error: Content is protected !!