ಕಡಬ: ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆ (ಪಿ.ಎಸ್.ಐ) ಪೋಲಿಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿ ತಮ್ಮ ಊರಿಗೆ ಹಾಗೂ ಕುಟುಂಬಕ್ಕೆ ಹೆಮ್ಮೆಪಡವಂತಹ ಸಾಧನೆಯನ್ನು ಮಾಡುವ ಮೂಲಕ ಕೊಂತೂರಿನ ಬದ್ರುನ್ನೀಶಾ ಎಂಬವರು ಯಶಸ್ವಿಯಾಗಿದ್ದಾರೆ.
![](http://dtvkannada.in/wp-content/uploads/2022/01/IMG-20220122-WA0047-1024x461.jpg)
ಇವರನ್ನು ನೆಕ್ಕರೆ ಜುಮ್ಮಾ ಮಸೀದಿ ಆಡಳಿತ ಸಮಿತಿ ಹಾಗೂ SKSSF ನೆಕ್ಕರೆ ಅಲಂಕಾರು ಶಾಖೆ ಇದರ ವತಿಯಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
![](http://dtvkannada.in/wp-content/uploads/2022/01/IMG-20220122-WA0046.jpg)
ಈ ಸಂದರ್ಭದಲ್ಲಿ ಜುಮ್ಮಾ ಮಸೀದಿ ಅಧ್ಯಕ್ಷರಾದ ಅಬ್ದುಲ್ಲ ಕುಞ್ಞಿ ಅಲಂಕಾರು, ನಿಕಟಪೂರ್ವ ಅಧ್ಯಕ್ಷ ಮೊಹಮ್ಮದ್ ಚೆರೆಮೋನ್, ಮಾಜಿ ಕಾರ್ಯದರ್ಶಿ ಎನ್.ಎ ಅಬೂಬಕ್ಕರ್ ನೆಕ್ಕರೆ, ಸಾಮಾಜಿಕ ಕಾರ್ಯಕರ್ತರಾದ ಪೀರ್ ಮಹಮ್ಮದ್ ಸಾಹೇಬ್ ಆಲಂಕಾರು, SKSSF ನೆಕ್ಕರೆ ಶಾಖೆ ಕಾರ್ಯದರ್ಶಿ ಇರ್ಷಾದ್ ನೆಕ್ಕರೆ, ಹಿರಿಯರಾದ ಅಬ್ದುಲ್ಲ ಹಾಜಿ ನೆಕ್ಕರೆ ಉಪಸ್ಥಿತರಿದ್ದರು.
![](http://dtvkannada.in/wp-content/uploads/2022/01/IMG-20220122-WA0040-768x1024.jpg)