dtvkannada

'; } else { echo "Sorry! You are Blocked from seeing the Ads"; } ?>

ಸುಳ್ಯ,ಜ.26: ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಅರಂಬೂರಿನ ಬದರ್ ಜುಮಾ ಮಸೀದಿಯಲ್ಲಿ ಅಲ್ ಅಮೀನ್ ಯೂತ್ ಫೆಡರೇಶನ್ ವತಿಯಿಂದ ಗಣರಾಜ್ಯೋತ್ಸವದ ಆಚರಣೆಯು ನಡೆಯಿತು.
ಈ ಶುಭ ಸಂದರ್ಭದಲ್ಲಿ ಧ್ವಜಾರೋಹಣವನ್ನು ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಹು| ಭಾಷಾ ಸಾಹೇಬ್ ಅರಂಬೂರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮದರಸ ವಿದ್ಯಾರ್ಥಿಗಳು ಧ್ವಜಗೀತೆ ಹಾಡಿದರು.

ಈ ಕಾರ್ಯಕ್ರಮದಲ್ಲಿ AYF ಅರಂಬೂರು ಇದರ ಪ್ರಧಾನ ಕಾರ್ಯದರ್ಶಿಗಳಾದ ಮುನೀರ್ ಶೈನ್ ರವರು ಮಾತನಾಡಿ ಪ್ರಸ್ತುತ ದಿನಗಳಲ್ಲಿ ಶಿಕ್ಷಣದ ಹಕ್ಕು ಮತ್ತು ಸಂವಿಧಾನದ ಪರಿಕಲ್ಪನೆಯನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಮಸೀದಿಯ ಖತೀಬರಾದ ಬಹು| ಮೂಸಾ ಹಾರೀಸ್ ಮಕ್ದೂಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

'; } else { echo "Sorry! You are Blocked from seeing the Ads"; } ?>

ಈ ಸಂದರ್ಭದಲ್ಲಿ ಮಸೀದಿಯ ಕಾರ್ಯದರ್ಶಿಗಳಾದ, ಅಕ್ಬರ್ ಕರಾವಳಿ, ಕೋಶಾಧಿಕಾರಿಗಳಾದ ಖಾದರ್ ಎಂ, ಅಲ್ ಫಲಾಹ್ ಮದರಸ ಅರಂಬೂರು ಇದರ ಸಂಚಾಲಕರಾದ ಅಲ್ಹಾಜ್ ಉಮ್ಮರ್ ಬುಶ್ರಾ, AYF ಅರಂಬೂರು ಇದರ ಅಧ್ಯಕ್ಷರಾದ ರಶೀದ್ ಮಾಂಬ್ಲಿ, ಪದಾಧಿಕಾರಿಗಳಾದ ಖಲಂದರ್ ಅರಂಬೂರು, ಆಶೀಕ್ ಅರಂಬೂರು, ಮಹಮ್ಮದ್ ಮಾಂಬ್ಲೀ, ಸಂಶುದ್ದೀನ್ ಮಾಂಬ್ಲಿ ಹಾಗೂ ಊರ ನಾಗರಿಕರು ಮದರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು AYF ಅರಂಬೂರು ಇದರ ಕಾರ್ಯದರ್ಶಿಗಳಾದ ಆಸೀಫ್ ಪನ್ನೆ ನಿರೂಪಿಸಿದರು.

'; } else { echo "Sorry! You are Blocked from seeing the Ads"; } ?>

ಕಾರ್ಯಕ್ರಮದ ಕೊನೆಯಲ್ಲಿ ಲಘು ಉಪಹಾರ ಹಾಗೂ ಸಿಹಿ ತಿಂಡಿ ಹಂಚಲಾಯಿತು.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!